ಕೃಷ್ಣನ ಸಹಿತ ಎಲ್ಲರಿಗೂ ಕೃಷ್ಣ ಜನ್ಮಾಷ್ಟಮಿಯ ಶುಭಾಶಯಗಳು


 

 

ಕೃಷ್ಣನ ಸಹಿತ ಎಲ್ಲರಿಗೂ ಕೃಷ್ಣ ಜನ್ಮಾಷ್ಟಮಿಯ 

ಶುಭಾಶಯಗಳು.

ಭಾಗ ೧ 

                                                    ಭಾಗ 1 


ಕೃಷ್ಣ ಎಂದರೆ 

 “ಸಂಭವಾಮಿ ಯುಗೇ ಯುಗೇ” ಎಂಬ ಭರವಸೆ.

ಕೃಷ್ಣ ಎಂದರೆ 

 “ಯೋಗಕ್ಷೇಮಂ ವಹಾಮ್ಯಹಮ್” ಎಂಬ ಜವಾಬ್ದಾರಿ. 

ಕೃಷ್ಣ ಎಂದರೆ

 “ಕರ್ಮಣ್ಯೇವಾಧಿಕಾರಸ್ತೇ ಮಾ ಫಲೇಷು ಕದಾಚನ” ಎಂಬ ಕಿವಿಮಾತು. 

ಕೃಷ್ಣ ಎಂದರೆ 

“ಸರ್ವಧರ್ಮಾನ್ ಪರಿತ್ಯಜ್ಯ ಮಾಮೇಕಂ ಶರಣಂ ವ್ರಜ” ಉಪದೇಶ.  

ಕೃಷ್ಣ ಎಂದರೆ 

“ಮನ್ಮನಾ ಭವ ಮದ್ಭಕ್ತೋ ಮದ್ಯಾಜೀ ಮಾಂ ನಮಸ್ಕುರು” ಎಂಬ ಬೋಧ-ಸದ್ಬೋಧ.
  
ಕೃಷ್ಣ ಎಂದರೆ 

“ಶ್ರೀ ರ್ವಿಜಯೋ ಭೂತಿಃ ಧ್ರುವಾ ನೀತಿಃ” ಎಂಬ ನೀತಿಸಹಿತವಾದ ಹ್ಯಾಟ್ರಿಕ್ ಲಾಭ.

ಕೃಷ್ಣ ಎಂದರೆ 

“ಯುಕ್ತಾಹಾರವಿಹಾರಸ್ಯ ಯುಕ್ತಚೇಷ್ಟಸ್ಯ ಕರ್ಮಸು” ಎಂಬ  ಸರ್ವಾಂಗಸುಂದರ ಯೋಗ.

ಕೃಷ್ಣ ಎಂದರೆ 

“ಆತ್ಮೈವ ಹ್ಯಾತ್ಮನೋ ಬಂಧುಃ ಆತ್ಮೈವ ಆತ್ಮನಾ ರಿಪುಃ” ಎಂಬ ತಿಳುವಳಿಕೆ. 

ಕೃಷ್ಣ ಎಂದರೆ

 “ನ ಹಿ ಜ್ಞಾನೇನ ಸದೃಶಂ ಪವಿತ್ರಮಿಹ ವಿದ್ಯತೇ” ಎಂಬ ಜ್ಞಾನಪಾರಮ್ಯ. 

ಕೃಷ್ಣ ಎಂದರೆ 

“ಜಾತಸ್ಯ ಹಿ ಧ್ರುವೋ ಮೃತ್ಯುಃ ಧ್ರುವಂ ಜನ್ಮ ಮೃತಸ್ಯ ಚ” ಎಂಬ  ಬದುಕಿನ ನಿರ್ವಾಣದರ್ಶನ!!

ಕೃಷ್ಣ ಎಂದರೆ 

“ಕ್ಲೈಬ್ಯಂ ಮಾ ಸ್ಮ ಗಮಃ, 
ತ್ಯಕ್ತ್ವಾ ಉತ್ತಿಷ್ಠ ಕ್ಷುದ್ರಂ ಹೃದಯದೌರ್ಬಲ್ಯಂ” ಎಂಬ  ಧೈರ್ಯದ ಮಾತು. 

ಕೃಷ್ಣ ಎಂದರೆ 

ವಾಸಾಂಸಿ ಜೀರ್ಣಾನಿ ಯಥಾ ವಿಹಾಯ 
ನವಾನಿ ಗೃಹ್ಣಾತಿ ನರೋSಪರಾಣಿ.
ತಥಾ ಶರೀರಾಣಿ ವಿಹಾಯ ಜೀರ್ಣಾನಿ 
ಅನ್ಯಾನಿ ಸಂಯಾತಿ ನವಾನಿ ದೇಹೀ” -   ಎಂಬ  ಶರೀರದ ಕರ್ಮಕಥೆ!!


ಕೃಷ್ಣ ಎಂದರೆ, 

“ನೈನಂ ಛಿಂದಂತಿ ಶಸ್ತ್ರಾಣಿ ನೈನಂ ದತಿ ಪಾವಕಃ | 
ನ ಚೈನಂ ಕ್ಲೇದಯಂತ್ಯಾಪೋ ನ ಶೋಷಯತಿ ಮಾರುತಃ||”  ಎಂಬ ಆತ್ಮದ  ಆತ್ಮಕಥೆ!!!




ಡಾ. ಶಿವಾನಂದ ಶಿವಾಚಾರ್ಯರು
ಹಿರೇಮಠ, ತುಮಕೂರು

Comments

Popular posts from this blog