Good Morning, Happy Tuesday
30th August 2022
@ TapOvanam, Hiremath, Tumkur
ಗೌರಿಗೆ ಭೂಮಿ ತವರುಮನೆ.
ಕೈಲಾಸ ಗಂಡನ ಮನೆ.
ಗೌರಿ ಪರ್ವತರಾಜನ ಪುತ್ರಿ.
ಅವಳು ಪಾರ್ವತಿ ಕೂಡ ಅಹುದು.
ಅವಳು ಪತಿಯ ಮನೆಯಿಂದ
ತವರುಮನೆಗೆ ಬಂದಿದ್ದಾಳೆ.
ಇದು ಕಾರಣ,
ಇವತ್ತು ತಾಯಂದಿರೆಲ್ಲ
ಗೌರಿಗೆ ಬಾಗಿನವನ್ನು ಕೊಟ್ಟು
ಅವಳನ್ನು ಗೌರವಿಸುತ್ತಿದ್ದಾರೆ
ಮತ್ತು ಅವಳ ಆಶೀರ್ವಾದವನ್ನು ಬಯಸುತ್ತಿದ್ದಾರೆ.
ಅಮ್ಮ ಗೌರಿ, “ಇಷ್ಟಾರ್ಥ ಸಿದ್ಧಿರಸ್ತು” ಎಂದು
ಎಲ್ಲರನ್ನೂ ಆಶೀರ್ವದಿಸಲಿ.
ಇದು ಗೌರಿಯಲ್ಲಿ ನಮ್ಮಗಳ
ಸವಿನಯ ಪ್ರಾರ್ಥನೆ.
ಡಾ. ಶಿವಾನಂದ ಶಿವಾಚಾರ್ಯರು
ಹಿರೇಮಠ, ತುಮಕೂರು
Comments
Post a Comment