Good Morning, Happy Wednesday
18th January 2023
@ TapOvanam, Hiremath, Tumkur

“ಅರಿದೊಡೆ ಶರಣ, ಮರೆದೊಡೆ ಮಾನವ”
ಪಾತಕನು, ಹೊಲೆಯನು ನಾನೇತಕ್ಕೆ ಬಾತೆ?
(ನಾನೇತಕ್ಕೆ ಬಾತೆ? = ನಾನೇತಕ್ಕೆ ಪ್ರಯೋಜನ?)
ಹೊತ್ತಿಗೊಂದೊಂದು ಪರಿಯ ಗೋಸುಂಬೆಯಂತೆ
ಈಶನ ಶರಣರ ಕಂಡುದಾಸೀನವ ಮಾಡುವ
ದಾಸೋಹವರಿಯದ ದೂಷಕನು ನಾನಯ್ಯ,
ಏಸು ಬುದ್ಧಿಯ ಹೇಳಿ ಬೇಸತ್ತೆನೀ ಮನಕೆ
ಈಶ ನೀ ಸಲಹಯ್ಯ, ಉರಿಲಿಂಗ ತಂದೆ” -

ಇದು ಶರಣ ಉರಿಲಿಂಗದೇವರ ವಚನ

“ಅರಿದೊಡೆ ಶರಣ, ಮರೆದೊಡೆ ಮಾನವ”

ಇದು ಶರಣರ ಮಾತು.
ಇದು ಶರಣ ಉಕ್ತಿ, ಇದು ಶರಣ ವಚನ.

“ಅರಿದೊಡೆ ಶರಣ, ಮರೆದೊಡೆ ಮಾನವ”

ಇದೇನೋ ಓಕೆ. ಇದಕ್ಕೆ “ಜೈ” ಎನ್ನೋಣ.

ಅರಿತಂತೆ ನಾಟಕವಾಡಿದೊಡೆ?

ಅದು ನಮಗೆ ನಾವೇ ಅಪ್ರಾಮಾಣಿಕರಾದಂತೆ;
ನಮಗೆ ನಾವೇ ಮೋಸಮಾಡಿಕೊಂಡಂತೆ.

ಮರೆತಂತೆ ನಾಟಕವಾಡಿದೊಡೆ?

ಅದು ನಾವು ಯಾರಿಂದಲೋ
ಸಾಲ ತೆಗೆದುಕೊಂಡಿದ್ದೇವೆ ಎಂದರ್ಥ.

ಡಾ. ಶಿವಾನಂದ ಶಿವಾಚಾರ್ಯರು
ಹಿರೇಮಠ, ತಪೋವನ, ತುಮಕೂರು

Comments

Popular posts from this blog