Posts

Showing posts from March, 2023
Image
  Good Morning, Happy Friday 24th March 2923 @ Hiremath, TapOvanam, Tumkur ಯುಗಾದಿ ಹಬ್ಬ ಹೊಸ ಸಂವತ್ಸರಕ್ಕೆ “ಸುಸ್ವಾಗತ”, “ವೆಲ್‌ಕಮ್”, “ಬಧಾಯೀ ಹೋ” ಹೇಳಿಯಾಗಿದೆ. ಶೋಭಕೃನ್ನಾಮ ಅಥವಾ ಶೋಭಾಕೃತ್ ನಾಮ ಸಂವತ್ಸರ ಆಗಮಿಸಿಯಾಗಿದೆ. ಯುಗಾದಿ ಬರೀ ಯುಗಾದಿ ಮಾತ್ರ ಅಲ್ಲ, ಅದು ಯುಗದ ಹಾದಿ ಕೂಡ ಅಹುದು. “ಯುಗ” ಅಂದರೆ ಇಲ್ಲಿ ಹೊಸ ಸಂವತ್ಸರ, ನೂತನ ವರುಷ, ನಯಾ ಸಾಲ್, ನ್ಯೂ ಇಯರ್ ಎಂದು ಅರ್ಥಮಾಡಿಕೊಳ್ಳಬೇಕು. ಯುಗ ಎಂದರೆ ಆ ಕೃತಯುಗ, ತ್ರೇತಾಯುಗ, ದ್ವಾಪರಯುಗ, ಕಲಿಯುಗ ಎಂದು ಅರ್ಥಮಾಡಿಕೊಳ್ಳಬೇಡಿ ಮತ್ತು ಆ ಯುಗಗಳ ಆದಿ ಎಂದು ಅರ್ಥಮಾಡಿಕೊಳ್ಳಬೇಡಿ. ಯುಗಾದಿ ಎಂದರೆ ಇಲ್ಲಿ ನೂತನ ಸಂವತ್ಸರದ ಆದಿ ಅಥವಾ ಮೊದಲ ದಿನ ಎಂದೇ ಅರ್ಥ. ಕೃತಯುಗ, ತ್ರೇತಾಯುಗ, ದ್ವಾಪರಯುಗ, ಕಲಿಯುಗ ಇವೆಲ್ಲ ಒಂದೊಂದು ಕಾಲಘಟ್ಟಗಳು. ಇವೆಲ್ಲ ಒಂದು ವರುಷದಿಂದ ಇನ್ನೊಂದು ವರುಷಕ್ಕೆ ಬದಲಾಗುವುದಿಲ್ಲ. ಈ ಒಂದೊಂದು ಯುಗವೂ ಸಾವಿರಾರು ವರುಷ ಬದುಕಿಕೊಂಡಿರುತ್ತದೆ ಮತ್ತು ಬಾಳಿಕೊಂಡಿರುತ್ತವೆ. ಅಷ್ಟು ಮಾತ್ರವಲ್ಲ, ಇವೆಲ್ಲ ಯುಗಗಳು ಒಂದೊಂದಾಗಿ ನಮ್ಮ, ನಿಮ್ಮಗಳನ್ನು ಸಾವಿರಾರು ವರುಷಗಳವರೆಗೆ, ಸಹಸ್ರ ಸಹಸ್ರ ವರುಷಗಳವರೆಗೆ ಆಳಿಕೊಂಡಿರುತ್ತವೆ. ಪಂಚಾಂಗದ ಪ್ರಕಾರ ಮತ್ತು ರಾಮಾಯಣ, ಮಹಾಭಾರತ, ಪುರಾಣ, ಪುಣ್ಯಕಥೆಗಳ ಪ್ರಕಾರ, ಕೃತಯುಗ ಅಥವಾ ಸತ್ಯಯುಗ - ಈ ಯುಗವೊಂದಕ್ಕೆ ಸಾವಿರಾರು ವರುಷಗಳ ಆಯುಷ್ಯವಿದೆ. ತ್ರೇತಾಯುಗ ಅಥವಾ ಅರ್ಧಸತ್ಯಯುಗ - ಈ ಯುಗವೊಂದ...
Image
  On 23rd March 2023, Thursday @ Hiremath, TapOvanam, Tumkur >>>>>>>>>>>>>>>>>>>> ಶಿವನಲ್ಲಿ ವಿಲೀನರಾದ ಎನ್. ಆರ್. ಜಗದೀಶಾರಾಧ್ಯರಿಗೆ ತುಮಕೂರು ಹಿರೇಮಠಾಧ್ಯಕ್ಷ ಡಾ. ಶ್ರೀ ಶ್ರೀ ಶಿವಾನಂದ ಶಿವಾಚಾರ್ಯ ಸ್ವಾಮೀಜಿಯವರ ಭಾವಪೂರ್ಣ ನುಡಿ-ಶ್ರದ್ಧಾಂಜಲಿ >>>>>>>>>>>>>>>>>>>>>>>>> ಎನ್. ಆರ್. ಜಗದೀಶಾರಾಧ್ಯರು ಶಿವನಲ್ಲಿ ವಿಲೀನವಾಗಿದ್ದಾರೆ. ಅದೂ ಸಹ ಯುಗಾದಿಯ ಪರ್ವದಿನದಂದು!! ಹೊಸ ಸಂವತ್ಸರಕ್ಕೆ ಜಗದೀಶಾರಾಧ್ಯರನ್ನು ಭರಿಸುವ ಶಕ್ತಿ ಇರಲಿಲ್ಲವೇನೋ? ಏನೇ ಹೇಳಿ, ನಮ್ಮಗಳ ಲೈಫ್‌ನ “ಆನ್” (ON) & “ಆಫ್” (OFF) ಬಟನ್‌ಗಳು ದೇವರ ಕೈಯಲ್ಲಿವೆ. ಅದೊಮ್ಮೆ ಆ ದೇವರು ನಮ್ಮಗಳ ಲೈಫ್‌ನ “ಆನ್” ಬಟನ್‌ನನ್ನು ಒತ್ತಿ ನಮ್ಮಗಳ “ಲೈಫು” ಶುರುಹಚ್ಚಿಕೊಳ್ಳುವ ಹಾಗೆ ಮಾಡುತ್ತಾನೆ. ಅದಕ್ಕಾಗಿ ಆತ ನಮ್ಮ ತಂದೆ, ತಾಯಿಗಳನ್ನು ನಿಮಿತ್ತ ಕಾರಣವಾಗಿಸಿಕೊಳ್ಳುತ್ತಾನೆ. ಮುಂದೆ, ಅದೆಂದೋ ಒಂದು ದಿನ, ಆ ದೇವರು ನಮ್ಮಗಳ ಅರಿವಿಗೆ ಬಾರದ ಹಾಗೆ ತನಗೆ ತಿಳಿದಂದು ಮತ್ತು ತನಗೆ ಸಾಕೆನಿಸಿದಾಗ ಮತ್ತು ನಮಗೂ ಸಹ ಕಾಯಿಲೆ, ಕಸಾಲೆಗಳ ಸಹವಾಸ ಸಾಕೆನಿಸಿ ಬಿ. ಪಿ., ಶುಗರ್‌ಗಳ ಏರಿಳಿತಗಳ ಚೆಲ್ಲಾಟ, ಆ ನೋವು, ಆ ಹಿಂಸೆ “ಇನ್ನು ಸಾಕಪ್ಪಾ ಸಾಕು” ಎನಿಸಿದಾಗ ನಮ್ಮಗಳ ಲೈಫ್‌...
Image
  Good Morning, Happy Tuesday 14th March 2023 @ TapOvanam, Hiremath, Tumkur “ಹುಟ್ಟಿಸಿದ ದೇವರು ಹುಲ್ಲು ಮೇಯಿಸುವುದಿಲ್ಲ; ಹೇಗೋ ನಡೆದುಕೊಂಡು ಹೋಗುತ್ತದೆ ಬಿಡಿ” - ಎಂದು ಹೇಳುವುದನ್ನು ನಾವು ಆಗಾಗ್ಗೆ ಕೇಳಿಸಿಕೊಳ್ಳುತ್ತಿರುತ್ತೇವೆ. ನಾವಷ್ಟೇ ಏನು, ನೀವುಗಳು ಕೂಡ ಈ ಮಾತನ್ನು ಕೇಳಿಸಿಕೊಳ್ಳುತ್ತಿರುತ್ತೀರಿ. ಮೇಲ್ನೋಟಕ್ಕೇನೇ ಈ ಮಾತು ತುಂಬ ಬೇಜವಾಬ್ದಾರಿಯದು ಎಂದೆನಿಸುತ್ತದೆ, ಅಲ್ವಾ? ಹುಟ್ಟಿಸಿದ ದೇವರು ಅದೇಕೆ ಮನುಷ್ಯನಿಗೆ ಹುಲ್ಲು ಮೇಯಿಸುತ್ತಾನೆ. ಅವನಿಗೇನು ಬೇರೆ “ಕಮಿಟ್‌ಮೆಂಟ್” ಇರೋದಿಲ್ವಾ? ಆತ ಮನುಷ್ಯನಿಗೂ ಹುಲ್ಲು ಮೇಯಿಸತೊಡಗಿದರೆ ಪಾಪ, ಆತನನ್ನೇ ನಂಬಿಕೊಂಡಿರುವ ಆ ಬಡಪಾಯಿ ಮೂಕಪ್ರಾಣಿಗಳು ಏನು ಮಾಡಬೇಕು? ಏನು ತಿನ್ನಬೇಕು? ನಾವೇನೋ ಮನುಷ್ಯರು ಅದು, ಇದು ತಿಂದುಕೊಂಡು ಬದುಕುತ್ತೇವೆ. ಮನುಷ್ಯ ಶಾಕಾಹಾರಿಯೂ ಅಹುದು, ಮಾಂಸಾಹಾರಿಯೂ ಅಹುದು. ಏನೂ ಸಿಕ್ಕದಿದ್ದರೆ ಮನುಷ್ಯ ಕೊನೇ ಪಕ್ಷ ಲಂಚವನ್ನಾದರೂ ತಿಂದುಬದುಕುತ್ತಾನೆ. ಪಾಪ ಆ ಮೂಕ ಪಶು, ಪಕ್ಷಿ, ಪ್ರಾಣಿಗಳು ಹಾಗಲ್ಲ. ಈ ಲಂಚ, ಮೋಸ, ವಂಚನೆ, ಪಾಪ...., ಅವುಗಳಿಗೇನು ಗೊತ್ತಾ? ಅದರಲ್ಲೂ, ಇನ್ನೊಂದು ಗಮನಾರ್ಹ ಅಂಶವೇನೆಂದರೆ, ವ್ಹೆಜ್ Veg ತಿನ್ನೋ ಪಶು, ಪಕ್ಷಿ, ಪ್ರಾಣಿಗಳು ನಾನ್‌ವ್ಹೆಜ್ Non Vegತಿನ್ನೋದಿಲ್ಲ. ನಾನ್‌ವ್ಹೆಜ್ ತಿನ್ನೋ ಪಶು, ಪಕ್ಷಿ, ಪ್ರಾಣಿಗಳು ಹುಲ್ಲು, ತರಕಾರಿ, ಗಡ್ಡೆ, ಗೆಣಸು ತಿನ್ನೋದಿಲ್ಲ. ಪಶು, ಪಕ್ಷಿ, ಪ್ರಾಣಿಗಳಿಗೆ ಅ...