Good Evening, Happy Thursday
9th March 2023
@ TapOvanam, Hiremath, Tumkur
ಯಾವುದೇ ಒಂದು ವಸ್ತುವನ್ನು,
ಪದ-ಪದಾರ್ಥವನ್ನು ಹ್ಯಾಗೆ ಪ್ಯಾಕ್ ಮಾಡಬೇಕು
How to pack it? & How to wrap it? -
ಎಂಬುವುದನ್ನು ಆ ದೇವರಿಗಿಂತ
ಚೆನ್ನಾಗಿ ತಿಳಿದವರು ಇನ್ನಾರಾದರೂ ಉಂಟೆ?
ವಸ್ತುಗಳನ್ನು “ಪ್ಯಾಕ್” ಮಾಡುವುದರಲ್ಲಿ
ದೇವರಿಗೆ ಪರ್ಯಾಯವೇ ಇಲ್ಲ.
ಈ ನಮ್ಮ ದೇಹವಿದೆಯಲ್ಲ,
ಇದನ್ನು ಆ ದೇವರು
ಅದೆಷ್ಟೊಂದು ಸುಂದರವಾಗಿ
``ಪ್ಯಾಕ್'' ಮಾಡಿದ್ದಾನೆ, ``Wrap'' ಮಾಡಿದ್ದಾನೆ, ಗೊತ್ತಾ?
ಹೊರಗಣ ಈ ಪ್ಯಾಕ್ ನೋಡಿಯೇ ಜನಗಳು
ಮರುಳಾಗುವ ಹಾಗೆ
ಮತ್ತು ಮೋಹಿಸುವ ಹಾಗೆ ಮಾಡಿದ್ದಾನೆ.
ಈ ದೇಹದ ಒಳಗೇನಿದೆ,
ಇದರ ಒಳಗಿರುವ ಬಂಡವಾಳ
ಏನು, ಎತ್ತ, ಅದೆಂತು ಎಂಬುವುದು
ಒಂದು ಚೂರು ಕೂಡ ಗೊತ್ತಾಗುವುದಿಲ್ಲ.
ಯಾರಿಗೂ ಏನೂ ಗೊತ್ತಾಗದಂತೆ
ದೇವರು ನಮ್ಮ ದೇಹದಲ್ಲಿರುವುದನ್ನೆಲ್ಲ
ತುಂಬ ಸುಂದರವಾದ ಚರ್ಮದ ಚೀಲದಲ್ಲಿ
(ತೊಗಲಚೀಲ) ತುಂಬಿಟ್ಟಿದ್ದಾನೆ.
ನಮ್ಮ ದೇಹದ ಒಳಾಂಗಣವೆಲ್ಲ
ಒಂದು ಸುಂದರವಾದ ಲೆದರ್ ಬ್ಯಾಗ್ನಲ್ಲಿ
(Leather Bag) ಸುತ್ತಿ ಇಡಲ್ಪಟ್ಟಿದೆ, ಅಷ್ಟೇ.
ಸಂಸ್ಕೃತ ಪ್ರಬೋಧ ಸುಧಾಕರ
ಗ್ರಂಥದಲ್ಲಿ ಒಂದು ಮಾತಿದೆ,
``ರುಧಿರತ್ರಿಧಾತುಮಜ್ಜಾಮೇದೋ
ಮಾಂಸಾಸ್ಥಿಸಂಹತಿರ್ದೇಹಃ |
ಸ ಬಹಿಸ್ತ್ವಚಾ ಪಿನದ್ಧಸ್ತ-
ಸ್ಮಾನ್ನೋ ಭಕ್ಷ್ಯತೇ ಕಾಕೈ: ||'' ಎಂದು.
ದೇಹವಿದು ರಕ್ತ, ವಾತ, ಪಿತ್ತ, ಕಫ (ತ್ರಿಧಾತು),
ಮಜ್ಜೆ, ಮೇದಸ್ಸು, ಮಾಂಸ, ಮೂಳೆ -
ಇವೆಲ್ಲವುಗಳ ಒಂದು ಸಮೂಹ.
ಹೊರಗಡೆ ಚರ್ಮವು
ಇವನ್ನೆಲ್ಲ ಮುಚ್ಚಿಕೊಂಡಿದೆಯಾದ್ದರಿಂದ
ಇದನ್ನು ಕಾಗೆಗಳು ತಿಂದುಹಾಕುತ್ತಿಲ್ಲ, ಅಷ್ಟೇ.
(ಸ ಬಹಿಃ ತ್ವಚಾ ಪಿನದ್ಧಃ
ತಸ್ಮಾತ್ ನ ಭಕ್ಷ್ಯತೇ ಕಾಕೈಃ) ಎಂದು.
ಈ ಚರ್ಮವೆಂಬ ಹೊದಿಕೆ ಇರದೆ ಹೋಗಿದ್ದರೆ,
ಓ ಮೈ ಗಾಡ್, Oh My God,
ಫಜೀತಿಯೋ ಫಜೀತಿ..!!
ಇದು ಕಾರಣ,
ನಮ್ಮ ದೇಹವನ್ನು ಒಂದು ಸುಂದರವಾದ
ಚರ್ಮದ ಚೀಲದಲ್ಲಿ,
ಚರ್ಮದ ಚೀಲವೆಂಬ Wrapper (ಹೊದಿಕೆ)ನಲ್ಲಿ
ಸುತ್ತಿ ಕಳುಹಿಸಿರುವ
ದೇವರಿಗೆ ನಾವು ಯಾವಾಗಲೂ ಕೃತಜ್ಞರಾಗಿರಬೇಕು
ಮತ್ತು ಆತನಿಗೊಂದು
``ಥ್ಯಾಂಕ್ಸ್ '' (Thanks) ಹೇಳಿಕೊಂಡಿರಬೇಕು.
ಡಾ. ಶಿವಾನಂದ ಶಿವಾಚಾರ್ಯರು,
ಹಿರೇಮಠ, ತಪೋವನ, ತುಮಕೂರು
Popular posts from this blog
Good Morning, Happy Monday 2nd October 2023 @ TapOvanam, Hiremath, Tumkur ಮಹಾತ್ಮರ ಬದುಕು, ಬಾಳುವೆಯೇ ಹಾಗೆ. ಅವರು ಅದೆಷ್ಟೋ ಜನಗಳ ಬದುಕಿಗೆ ಅನ್ನ, ನೀರು ಗಂಜಿ. ಅವರು ಬದುಕಿರುವಾಗಲೇನೋ ಸರಿಯೇ ಸರಿ. ಆದರೆ ಅವರು ಇಲ್ಲ-ಇನ್ನಿಲ್ಲವಾದ ಮೇಲೆಯೂ ಅದೆಷ್ಟೋ ಜನರಿಗೆ ಅವರು ಅನ್ನ, ನೀರು, ಗಂಜಿಯಾಗಿ ಬದುಕು ಕೊಟ್ಟುಕೊಂಡಿರುತ್ತಾರೆ. ಗಾಂಧೀಜಿ ಕೂಡ ಈ ಮಾತಿಗೆ ಹೊರತಲ್ಲ!! ಡಾ. ಶಿವಾನಂದ ಶಿವಾಚಾರ್ಯರು ಹಿರೇಮಠ, ತಪೋವನ, ತುಮಕೂರು
Good Morning, Happy Monday 2nd October 2023 @ TapOvanam, Hiremath, Tumkur ಸೆಪ್ಟೆಂಬರ್ ಮಾಹೆಯಲ್ಲಿ ಗೌರೀ ಗಣೇಶಜಿ. ಅಕ್ಟೋಬರ್ ಮಾಹೆಯಲ್ಲಿ ಗಾಂಧೀಜಿ, ಶಾಸ್ತ್ರೀಜಿ. ಈ ವರುಷದ ಸೆಪ್ಟೆಂಬರ್ ತಿಂಗಳಿನಲ್ಲಿ ಗೌರೀ ಗಣೇಶ ಹಬ್ಬ ಅಕ್ಟೋಬರ್ ತಿಂಗಳಿನಲ್ಲಿ ಗಾಂಧೀಜಿ, ಶಾಸ್ತ್ರೀಜಿ ಜಯಂತಿ, ಹುಟ್ಟುಹಬ್ಬ. ಗೌರೀ, ಗಣೇಶ ಹಬ್ಬ ಧಾರ್ಮಿಕ, ಸಾಮಾಜಿಕ, ಸಾಂಸ್ಕೃತಿಕ. ಗಾಂಧೀಜಿ, ಶಾಸ್ತ್ರೀಜಿ ಜಯಂತಿ ಸಾರ್ವಜನಿಕ ಹಾಗೂ ದೇಶಭಕ್ತಿ ಪ್ರೇರಕ. ಗಣೇಶ ವಿನಾಯಕ, ಗಣನಾಯಕ, ಗಾಂಧೀಜಿ, ಶಾಸ್ತ್ರೀಜಿ ನಾಯಕರು, ರಾಷ್ಟ್ರನಾಯಕರು. ಗಣೇಶ ವಿಘ್ನನಾಶಕ, ವಿಘ್ನವಿನಾಶಕ ಮತ್ತು ಮುಕ್ತಿದಾಯಕ. ಗಾಂಧೀಜಿ, ಶಾಸ್ತ್ರೀಜಿ ದಾಸ್ಯನಾಶಕರು ಮತ್ತು ಸ್ವಾತಂತ್ರ್ಯದಾಯಕರು. ಗೌರೀ, ಗಣೇಶರ ಆಗಮನದಿಂದ ಲೋಕೋದ್ಧಾರ. ಗಾಂಧೀಜಿ, ಶಾಸ್ತ್ರೀಜಿಯವರ ಆಗಮನದಿಂದ ದೇಶೋದ್ಧಾರ. ಗೌರೀ ಗಣೇಶರು ಕೈಲಾಸದಿಂದ ಭೂಮಿಗೆ ಬಂದವರು. ಗಾಂಧೀಜಿ, ಶಾಸ್ತ್ರೀಜಿಗಳು ತ್ಯಾಗ, ಬಲಿದಾನಗಳಿಂದ ಭೂಮಿಯಿಂದ ಕೈಲಾಸದೆತ್ತರಕ್ಕೆ ಬೆಳೆದವರು. ಗೌರೀ ಗಣೇಶ ಭಕ್ತವತ್ಸಲರು. ಗಾಂಧೀಜಿ, ಶಾಸ್ತ್ರೀಜಿ ದೇಶವತ್ಸಲರು. ಗೌರೀ ಗಣೇಶರದು ಅಮ್ಮ, ಮಗನ ಸಂಬಂಧ. ಗಾಂಧೀಜಿ, ಶಾಸ್ತ್ರೀಜಿಗಳದು ತತ್ತ್ವ, ಸಿದ್ಧಾಂತದ ಸಂಬಂಧ. ಗೌರೀ ಗಣೇಶರು ಜನಗಳಿಗೆ ಭಕ್ತಿಯ ಪಾಠಮಾಡುತ್ತಾರೆ. ಗಾಂಧೀಜಿ, ಶಾಸ್ತ್ರೀಜಿ ಜನಗಳಿಗೆ ದೇಶಭಕ್ತಿಯ ಪಾಠಮಾಡುತ್ತಾರೆ. ಗೌರೀ, ಗಣೇಶರ ಹಬ್ಬದಿಂದ ಜನಗಳ ಮೈ, ಮನಸ್ಸುಗಳಲ್ಲಿ ಪುಳಕ ಗಾ...

Comments
Post a Comment