6th July 2023
@ TapOvanam, Hiremath, Tumkur

ಜನಗಳು ಬದಲಾವಣೆಯನ್ನು ಬಯಸಿದ್ದರು.
ಅಧಿಕಾರಿಗಳ ವರ್ಗಾವಣೆಯನ್ನಲ್ಲ!!
ಸರಕಾರ ಬದಲಾವಣೆಗಿಂತ ವರ್ಗಾವಣೆಗೇನೇ
ಹೆಚ್ಚು ಆದ್ಯತೆಯನ್ನು ಕೊಟ್ಟುಕೊಂಡಂತಿದೆ.
ಈಗ ಮಾತ್ರ ಹಾಗೆ ಅಂತ ಅಲ್ಲ,
ಯಾವಾಗಲೂ ಹಾಗೇನೇ!!
``ಬದಲಾವಣೆ ಜಗದ ನಿಯಮ;
ವರ್ಗಾವಣೆ ಸರಕಾರದ ನಿಯಮ''
ಸರಕಾರಗಳ ಬದಲಾವಣೆಯಾದಾಗ
ವರ್ಗಾವಣೆ ಅನಿವಾರ್ಯ ಎನ್ನುವಂತಾಗಿದೆ.
ಸರಕಾರ ಅಧಿಕಾರಿಗಳನ್ನು
ತನಗೆ ಅನುಕೂಲವೆನಿಸುವ
“ಕಂಫರ್ಟೇಬಲ್” (Comfortable) ಆಗುವ
ಜಾಗೆಗಳಲ್ಲಿ ಕುಳ್ಳಿರಿಸುತ್ತದೆ.
ಡಾ. ಶಿವಾನಂದ ಶಿವಾಚಾರ್ಯರು
ಹಿರೇಮಠ, ತಪೋವನ, ತುಮಕೂರು

Comments

Popular posts from this blog

21st September 2023