Pious & Cool Morning to All. Happy Friday
7th July 2023
@ TapOvanam, Hiremath, Tumkur


ಮಹಾಜನಗಳೇ,

ನಿಮ್ಮ ಶಾಸಕರು ಸಂತರಲ್ಲ; ಅವರು ಸಂತೆ.

ವಿಧಾನಸಭೆಯ ಕಲಾಪಗಳನ್ನು ನೋಡಿ.
ನಿಮಗೆ ನಮ್ಮ ಮಾತು “ಗ್ಯಾರಂಟಿ” ಎನಿಸುತ್ತದೆ.

ಈಗ ಗ್ಯಾರಂಟಿಯೊಂದಿಗೆ ಹೇಳಿದರೆ
ನಿಮಗೆ ತಿಳಿಯುತ್ತದೆ!!

ವಿಧಾನಸಭೆಯ ಕಲಾಪಗಳಲ್ಲಿ
ರಾಜ್ಯದ ಹಿತ ಮತ್ತು ರಾಜ್ಯದ ಜನತೆಯ ಹಿತದ ಚರ್ಚೆಗಿಂತಲೂ
ಅದು, ಇದು, ಹಾಗೆ, ಹೀಗೆ ಎಂಬ
ವಿಷಯಕ್ಕೆ ಸಂಬಂಧಿಸಿದ
ಚರ್ವಿತಚರ್ವಣವೇ ಜಾಸ್ತಿ ಇರುತ್ತದೆ.

ವಿಧಾನಸಭೆಯ ಕಲಾಪಗಳು
ಬೆಂಗಳೂರಿನ ಮ್ಯಾಜೆಸ್ಟಿಕ್ ಸರ್ಕಲ್
ಮತ್ತು ಕಲಾಸಿಪಾಳ್ಯಂಗಳಲ್ಲಿನ
ಗದ್ದಲ, ಗಲಾಟೆಯನ್ನು ಮೀರಿಸುವಂತೆ ಇರುತ್ತವೆ.

ನಮ್ಮ ಶಾಸಕರುಗಳ ಭಾಷೆಯೂ ಕೂಡ ಹಾಗೇನೇ.

ಅದು ಮ್ಯಾಜೆಸ್ಟಿಕ್ ಅಲ್ಲ;
ಅದು ಕಲಾಸಿಪಾಳ್ಯಮ್!!

ಬಹುತೇಕ ನಮ್ಮ ಶಾಸಕರುಗಳು
“ಸಿನ್ಸೀಯರು” ಅಲ್ಲ, “ಸೀರಿಯಸ್ಸು” ಅಲ್ಲ.

ಶಾಸಕರಲ್ಲಿ ಇರಬೇಕಾದ ಆ ಘನತೆ, ಗೌರವ,
ಗಾಂಭೀರ್ಯವೇ ಇಲ್ಲವಾಗಿದೆ.
ಅದುವೇ ಅವರಲ್ಲಿ ತೀವ್ರ ಅಭಾವಕ್ಕೆ ತುತ್ತಾಗಿದೆ.

ಇನ್ನು ಮುಂದಿನ ದಿನಗಳಲ್ಲಿ ಶ್ರೀಮಂತರು
ಶಾಸಕರಾಗುವುದಕ್ಕಿಂತ
ಸಂಸ್ಕಾರವಂತರು ಶಾಸಕರಾದರೆ ಒಳ್ಳೆಯದು.

ಅದು ನಮ್ಮ ದೇಶದ ಮತ್ತು
ನಮ್ಮ ಮುಂದಿನ ಜನಾಂಗದ ಭವಿಷ್ಯದ
ದೃಷ್ಟಿಯಿಂದ ಒಳ್ಳೆಯದು.

ಎಲ್ಲ ಶಾಸಕರೂ ಹಾಗೆಯೇ ಎಂದೇನಿಲ್ಲ.
ಆದರೆ ಬಹುತೇಕ ಮತ್ತು
ಬಹುಪಾಲು ಜನ ಶಾಸಕರು “ಹಾಗೆ” ಇರುವುದರಿಂದ
ಎಲ್ಲರೂ ಹಾಗೇನೇ ಎನ್ನುವಂತಾಗಿದೆ.

ಬಹಳಷ್ಟು ಜನ ಶಾಸಕರು ನಾಲಿಗೆಗೆ
“ಫಿಲ್ಟರ್” ಹಾಕಿಸಿಕೊಳ್ಳಬೇಕಾಗಿದೆ.

ಅವರ ನಾಲಿಗೆ “ಯದ್ವಾತದ್ವಾ”
ಮಾತನಾಡಿಕೊಂಡಿರುತ್ತದೆ.

ಪರಸ್ಪರ ಒಬ್ಬ ಶಾಸಕ ಇನ್ನೊಬ್ಬ
ಶಾಸಕನಿಗೆ ಗೌರವ ಕೊಟ್ಟು ಮಾತನಾಡುವ
ಕನಿಷ್ಠ ಸೌಜನ್ಯವೂ ಅವರಲ್ಲಿ ಇಲ್ಲವಾಗಿದೆ.

ಶಾಸಕರುಗಳ ಗತಿಯೇ ಹೀಗೆಂದಾದರೆ
ಇನ್ನು ಪಾಪ, ಜನಸಾಮಾನ್ಯರ ಗತಿ ಏನು?

ಡಾ. ಶಿವಾನಂದ ಶಿವಾಚಾರ್ಯರು
ಹಿರೇಮಠ, ತಪೋವನ, ತುಮಕೂರು

Comments

Popular posts from this blog

21st September 2023