Posts

Showing posts from August, 2023

LingadhaaraNam to Poorvika

Image
 

TapOvana Vidyaarthi Dinam - 31st August 2023

Image
 
Image
  Good Morning, Happy Thursday 31st August 2023 @ TapOvanam, Hiremath, Tumkur >>>>>>>>>>>>>>>>>>>>>>>>>>>>>>>>>> ಸಿರಿಗರ ಹಿಡಿದವರ ನುಡಿಸಲು ಬಾರದಯ್ಯ!! ``ಮೊಬೈಲ್‌ಗರ'' ಹಿಡಿದವರ ನುಡಿಸಲು ಬಾರದಯ್ಯ!! >>>>>>>>>>>>>>>>>>>>>>>>>>>>>>>>>>> ``ಹಾವು ತಿಂದವರ ನುಡಿಸಬಹುದು ಗರ ಹಿಡಿದವರ ನುಡಿಬಹುದು ಸಿರಿಗರ ಹಿಡಿದವರ ನುಡಿಸಲು ಬಾರದು ನೋಡಯ್ಯ ಬಡತನವೆಂಬ ಮಂತ್ರವಾದಿ ಹೊಗಲು ಒಡನೆ ನುಡಿವರಯ್ಯ, ಕೂಡಲಸಂಗಮದೇವಾ'' ಪ್ರಸ್ತುತ ಕಾಲಘಟ್ಟದಲ್ಲಿ ಬಸವಣ್ಣನವರ ಈ ವಚನ ಒಂದಷ್ಟು ರೂಪಾಂತರದೊಂದಿಗೆ....., ``ಹಾವು ಕಚ್ಚಿದವರ ನುಡಿಸಬಹುದು ಚೇಳಿನಿಂದ ಕುಕ್ಕಿಸಿಕೊಂಡವರ ನುಡಿಸಬಹುದು ಗರ ಹಿಡಿದವರ, ಸಾಮಾನ್ಯಗರ ಹಿಡಿದವರ ನುಡಿಸಬಹುದು ಸಿರಿಗರ, ಅಧಿಕಾರಗರ, ಕೀರ್ತಿಗರ ಹಿಡಿದವರ ನುಡಿಸಬಹುದು ಮೊಬೈಲ್‌ಗರ ಹಿಡಿದವರ ನುಡಿಸಲು ಬಾರದಯ್ಯ “ಕರೆನ್ಸಿ” ಎಂಬ “ಡಾಟಾವಾದಿ” ಇಲ್ಲವಾಗಲು ಒಡನೆ ನುಡಿವರಯ್ಯ, “ಕರೆನ್ಸಿ” ಇಲ್ಲವೆಂದು, “ಡಾಟಾ” ಖಾಲಿ ಆಯಿತೆಂದು!! ಬಸವಣ್ಣನವರ ವಚನಗಳು ಜನಗಳ ಮನಸ್ಥಿತಿಗೆ ಕನ್ನಡಿ ಹಿಡಿದಂತಿವೆ. ಬಸವ...
Image
  Good Morning, Happy Thursday 31st August 2023 @ TapOvanam, Hiremath, Tumkur ನಮಗೆ ಸಂಸ್ಕೃತ ದಿವ್ಯಭಾಷೆ ಎಂಬ ಹೆಮ್ಮೆ ಇದೆ, ಆ ಗೌರವ ಇದೆ. ಆದರೆ ಅದು ಜನಸಾಮಾನ್ಯರ ಭಾಷೆ, ಆಮ್‌ಆದ್ಮೀ, ಕಾಮನ್ ಮ್ಯಾನ್ ಭಾಷೆ, ಆಗಬೇಕೆಂಬ ಕಾಳಜಿ ಇದೆ, ಕಳಕಳಿ ಇದೆ. ಸಂಸ್ಕೃತ ಮತ್ತು ಸಂಸ್ಕೃತಿ ಇವೆರಡೂ ಭಾರತೀಯರ ಅವಳಿ, ಜವಳಿ ಸಂತಾನವಿದ್ದ ಹಾಗೆ. ಸಂಸ್ಕೃತ ಮತ್ತು ಸಂಸ್ಕೃತಿ - ಇವೆರಡೂ ಸ್ವರ್ಗಾದಪಿ ಗರೀಯಸೀ. ಸಂಸ್ಕೃತ ಮತ್ತು ಸಂಸ್ಕೃತಿ ಇವೆರಡನ್ನೂ ನಾವುಗಳು ಆಪ್ತವಾಗಿಸಿಕೊಂಡಿದ್ದರೆ ಸ್ವರ್ಗದ ಕುರಿತು ನಾವು ಅಷ್ಟೊಂದು ಕಾಳಜಿ ವಹಿಸಬೇಕಿಲ್ಲ. ಏಕೆಂದರೆ ಇವೆರಡರ ಜೊತೆಯಲ್ಲಿ ಇರೋದು ಮತ್ತು ಗುರುತಿಸಿಕೊಳ್ಳೋದು ಎಂದರೆ ಅದು ಸ್ವರ್ಗದಲ್ಲಿ ಇದ್ದಂತೆ ಮತ್ತು ಅದು ಸ್ವರ್ಗದಲ್ಲಿ ಇರೋದಕ್ಕಿಂತಲೂ ಹೆಚ್ಚು. ನಮ್ಮ ದೇಶದ ರಾಷ್ಟ್ರಘೋಷ - ``ಸತ್ಯಮೇವ ಜಯತೇ'' “ಸಂಸ್ಕೃತ ಏವ ಜಯತೇ” ಇದು ಸಂಸ್ಕೃತಮನಸ್ಕರ ಘೋಷವಾಕ್ಯ. “ಭಾಷಾಸು ಮುಖ್ಯಾ ಮಧುರಾ ದಿವ್ಯಾ ಗೀರ್ವಾಣಭಾರತೀ” “ಜಗತ್ತಿನ ಎಲ್ಲ ಭಾಷೆಗಳಲ್ಲಿ ಅತ್ಯಂತ ಮುಖ್ಯವಾದುದು, ಮಧುರವಾದುದು ಮತ್ತು ದಿವ್ಯವಾದುದು ಸಂಸ್ಕೃತಭಾಷೆ” - ಎಂದು ಜಗತ್ತಿನ ಬಹುತೇಕ ಭಾಷಾತಜ್ಞರು ಒಪ್ಪಿಕೊಂಡಿದ್ದಾರೆ. ಸಂಸ್ಕೃತ ಭಾಷೆ ಎಲ್ಲ ಭಾಷೆಗಳಿಗೆ ತಾಯಿ ಇದ್ದ ಹಾಗೆ. ಸಂಸ್ಕೃತಭಾಷೆ ಎಲ್ಲ ಭಾಷೆಗಳ ತವರುಮನೆ. ಸಂಸ್ಕೃತಭಾಷೆ ಎಲ್ಲ ಭಾಷೆಗಳ ನೃತ್ಯ, ನಟನೆಗಳ ರಂಗಭೂಮಿ ಮತ್ತು ರಂಗವೇದಿಕೆ ಇದ್ದ ಹಾಗೆ. “ಭಾ...
Image
30th August 2023 @ TapOvanam, Hiremath, Tumkur  ಹಲ್ಲಿ ಲೊಚಲೊಚ ಅನ್ನಬಾರದು. ಮನಸ್ಸು ಕಿಚಕಿಚ ಅನ್ನಬಾರದು. “ಹಲ್ಲಿ ಲೊಚಲೊಚ ಅನ್ನಬಾರದಂತೆ”  ಹೀಗೆಂದು ಹೇಳುತ್ತಾರೆ ಹಿರಿಯರು. ಹಲ್ಲಿ ಲೊಚಲೊಚ ಎಂದರ  ಏನೋ ಶಕುನವಂತೆ!! ಹಲ್ಲಿ ಲೊಚಲೊಚ ಎಂದರೆ   ಶಕುನವೋ ಅಪಶಕುನವೋ? ಮನಸ್ಸು ಕಿಚಕಿಚ ಎಂದರೆ   ಪಕ್ಕಾ “ಗ್ಯಾರಂಟಿ” ಅಪಶಕುನ.   ಮನಸ್ಸು ಕಿಚಕಿಚ ಅನ್ನಬಾರದು  ಎಂದರೆ ಮನಸ್ಸಿಗೆ ಧ್ಯಾನ, ಯೋಗ, ಸಜ್ಜನಸಂಗ,  ಸದ್ಗ್ರಂಥವ್ಯಾಸಂಗಗಳ ದೀಕ್ಷೆ ಕೊಡಬೇಕು.  ಡಾ. ಶಿವಾನಂದ ಶಿವಾಚಾರ್ಯರು ಹಿರೇಮಠ, ತಪೋವನ, ತುಮಕೂರು   Follow us For Further Details  ಕೆಳಗಿನ ಈ ಲಿಂಕ್‌ಗಳ ಮೇಲೆ ಕ್ಲಿಕ್ ಮಾಡಿ. Click on Facebook : https://www.facebook.com/profile.php?id=100063584633912... Follow us on Blogspot : https://shivayacha.blogspot.com Follow us on You Tube: https://youtu.be/RcvfsDbiftk 
Image
  ನಮ್ಮದು “ನಮೋ ಸಂಸ್ಕೃತಿ”... ನಮ್ಮದು “ಬಸವಸಂಸ್ಕೃತಿ”.....     ಕೃಷ್ಣಸಂಧಾನ ವಿಫಲವಾಗುತ್ತದೆ. ಕುರುಕ್ಷೇತ್ರ ಯುದ್ಧದ ತಿಥಿ ನಿರ್ಧಾರವಾಗುತ್ತದೆ. ಕೌರವ, ಪಾಂಡವ ಎರಡೂ ಪಕ್ಷದಲ್ಲೂ ಯುದ್ಧದ ತಯ್ಯಾರಿ, ಮಾನಸಿಕ ತಯ್ಯಾರಿ ಶುರುವಾಗುತ್ತದೆ. ಸೈನ್ಯವನ್ನು ಜೋಡಿಸಿಯಾಯಿತು. ಚದುರಂಗ ಬಲವನ್ನು ಸಿದ್ಧಗೊಳಿಸಿಯಾಯಿತು. ಪರಸ್ಪರರು ಪರಸ್ಪರರನ್ನು ಸಂಧಿಸಿ ತಮ್ಮ ಬಲಸಂವರ್ಧನೆಯನ್ನು ಮಾಡಿಕೊಳ್ಳುವುದಕ್ಕೆ ತೊಡಗುತ್ತಾರೆ. ಈ ಮಧ್ಯದಲ್ಲಿ ಕೆಲವು ಪಕ್ಷಾಂತರಗಳಾಗುತ್ತವೆ.  ಕುರುಕ್ಷೇತ್ರ ಯುದ್ಧದ ತಯ್ಯಾರಿ ಕೆಲವು ಅನಿರೀಕ್ಷಿತ ತಯ್ಯಾರಿಗಳಿಗೆ ಸಾಕ್ಷಿಯಾಗುತ್ತದೆ.  ಕುರುಕ್ಷೇತ್ರ ಯುದ್ಧದ ಪೂರ್ವಭಾವಿ ತಯ್ಯಾರಿ ಕೆಲವು ಆಘಾತಕಾರಿ ಬದಲಾವಣೆಗೆ ಕಾರಣವಾಗುತ್ತದೆ. ತಮ್ಮ ರಾಜ್ಯದಿಂದ ಪಾಂಡವರ ಪರವಾಗಿ ಯುದ್ಧಮಾಡಬೇಕೆಂದು ಸೈನ್ಯಸಹಿತ ಹೊರಟವರು ಮಾರ್ಗಮಧ್ಯದಲ್ಲಿಯೇ ತಮ್ಮ ತೀರ್ಮಾನವನ್ನು ಬದಲಾಯಿಸಿ ಕೌರವರ ಪರವಾಗಿ ಯುದ್ಧಮಾಡಬೇಕಾದ ಪರಿಸ್ಥಿತಿಗಳು ನಿರ್ಮಾಣವಾಗುತ್ತವೆ. ಇದಕ್ಕೆ ಮದ್ರದೇಶದ ಶಲ್ಯನೇ ಬಹುದೊಡ್ಡ ಉದಾಹರಣೆ.  ಶಲ್ಯನಿಗೆ ತನ್ನ ತಂಗಿ ಮಾದ್ರಿಯ ಮಕ್ಕಳ ಜೊತೆಯಲ್ಲಿಯೇ ಯುದ್ಧಮಾಡಬೇಕಾಗಿ ಬರುತ್ತದೆ. ಯಾವುದೋ ಒಂದು ಮುಲಾಜಿಗೆ ಬಿದ್ದು ಆತ ದುರ್ಯೋಧನನ ಪರವಾಗಿ ನಿಂತುಕೊಳ್ಳಬೇಕಾಗುತ್ತದೆ.  ಶಲ್ಯ ಮಹಾರಾಜ ದುರ್ಯೋಧನನ “ಆಪರೇಶನ್ ಆತಿಥ್ಯ”ದ (ಆಪರೇಶನ್ ಹಾಸ್ಪಿಟ್ಯಾಲಿಟಿ) ...