Posts

Showing posts from August, 2022
Image
   ಇವತ್ತು ವೀರಭದ್ರ ಜಯಂತಿ.  ಎಲ್ಲರೂ ವೀರಭದ್ರಸ್ವಾಮಿಯ ದೇವಸ್ಥಾನಗಳಿಗೆ ಹೋಗಿ ಭಕ್ತಿಸಮರ್ಪಣೆ ಮಾಡುತ್ತಲಿದ್ದಾರೆ. ಎಲ್ಲರೂ ಭದ್ರಕಾಳೀ ಸಮೇತನಾದ ವೀರಭದ್ರನ ಕೃಪಾವಾಂಛಿತರಾಗಿದ್ದಾರೆ. ಈ ಸಂದರ್ಭದಲ್ಲಿ, ಒಂದೆರಡು ಮಾತು.   ವೀರಭದ್ರ ವೀರಗಾಸೆಯೂ ಅಹುದು. ಆತ ವೀರಗಾಥೆಯೂ ಅಹುದು.  ವೀರಭದ್ರ ಸಾಹಸಗಾಥೆಯೂ ಅಹುದು. ಆತ ಸಾಧನಾಗೀತೆಯೂ ಅಹುದು. ವೀರಭದ್ರ ಕಲೆಯೂ ಅಹುದು; ಆತ ಕಾಲನೂ ಅಹುದು. ವೀರಭದ್ರ ಕುಣಿಯಲು ನಿಂತರೆ ಕಲೆ. ವೀರಭದ್ರ ಕುಣಿಸಲು ನಿಂತರೆ ಕಾಲ, ಸಾಕ್ಷಾತ್ ಪ್ರಳಯಕಾಲ.  ತಾಳ, ಮೇಳ, ಹೆಜ್ಜೆ, ಗೆಜ್ಜೆ ಜೊತೆಯಾದರೆ ವೀರಭದ್ರ ಕಲಾಭಾರ್ಗವ. ತಾಳ, ಮೇಳ, ಹೆಜ್ಜೆ, ಗೆಜ್ಜೆ ತಪ್ಪಿದರೆ ವೀರಭದ್ರ ಕಾಲಭೈರವ.   ವೀರಭದ್ರ ಮೀಸೆ ಕುಣಿಸಿದರೆ ಆತ ಮೀಸೆ ವೀರಭದ್ರ. ವೀರಭದ್ರ ಕಣ್ಣು ಕೆಂಪಾಗಿಸಿದರೆ ಆತ ಕೆಂಗಣ್ಣ ವೀರಭದ್ರ. ವೀರಭದ್ರ ಕಣ್ಣರಳಿಸಿದರೆ ಆತ ಕರುಣಾಳು ವೀರಭದ್ರ. ವೀರಭದ್ರ ಒಲಿದರೆ ಪ್ರಸನ್ನರುದ್ರ;  ಮರೆತರೆ ಆತ ಪ್ರಳಯರುದ್ರ. ಅರಿತರೆ ವೀರಭದ್ರ ಆಪದ್ಬಾಂಧವ; ಮರೆತರೆ ವೀರಭದ್ರ ಆಪತ್ತಿಗೆ ಬಾಂಧವ. ಅರಿದೊಡೆ ಶರಣ, ಮರೆದೊಡೆ ಮಾನವ ಎಂಬ ಹಾಗೆ. ವೀರಭದ್ರನದು ಬರೀ “ಉತ್ತಿಷ್ಠ, ಜಾಗ್ರತ” ಎಂದು ಹೇಳಿ  ಕುಳಿತುಕೊಳ್ಳುವ ಜಾಯಮಾನವಲ್ಲ. ಆತ ಸ್ವತಃ ತಾನು ಮೊದಲು ಎದ್ದು, ಎಚ್ಚತ್ತು ಎಲ್ಲರನ್ನೂ ಎಚ್ಚರಿಸುತ್ತಾನೆ. ಇದು ಕಾರಣ,  ಆತ “ಭಲೆರೇ, ಭಲೇ ಭಲೇ.. ಭಲೆರೇ, ಭಲೇ ಭಲೇ” ...
Image
Good Morning, Happy Tuesday 30th August 2022 @ TapOvanam, Hiremath, Tumkur ಎಲ್ಲರಿಗೂ ಗೌರೀ ಹಬ್ಬದ ಶುಭಾಶಯಗಳು. ಗೌರಿಗೆ ಭೂಮಿ ತವರುಮನೆ. ಕೈಲಾಸ ಗಂಡನ ಮನೆ. ಗೌರಿ ಪರ್ವತರಾಜನ ಪುತ್ರಿ. ಅವಳು ಪಾರ್ವತಿ ಕೂಡ ಅಹುದು. ಅವಳು ಪತಿಯ ಮನೆಯಿಂದ ತವರುಮನೆಗೆ ಬಂದಿದ್ದಾಳೆ. ಇದು ಕಾರಣ, ಇವತ್ತು ತಾಯಂದಿರೆಲ್ಲ ಗೌರಿಗೆ ಬಾಗಿನವನ್ನು ಕೊಟ್ಟು ಅವಳನ್ನು ಗೌರವಿಸುತ್ತಿದ್ದಾರೆ ಮತ್ತು ಅವಳ ಆಶೀರ್ವಾದವನ್ನು ಬಯಸುತ್ತಿದ್ದಾರೆ. ಅಮ್ಮ ಗೌರಿ, “ಇಷ್ಟಾರ್ಥ ಸಿದ್ಧಿರಸ್ತು” ಎಂದು ಎಲ್ಲರನ್ನೂ ಆಶೀರ್ವದಿಸಲಿ. ಇದು ಗೌರಿಯಲ್ಲಿ ನಮ್ಮಗಳ ಸವಿನಯ ಪ್ರಾರ್ಥನೆ. ಡಾ. ಶಿವಾನಂದ ಶಿವಾಚಾರ್ಯರು ಹಿರೇಮಠ, ತುಮಕೂರು
Image
  Good Morning, Happy Tuesday 30th August 2022 @ TapOvanam, Hiremath, Tumkur ಎಲ್ಲರಿಗೂ ಗೌರೀ ಹಬ್ಬದ ಶುಭಾಶಯಗಳು. ಪುರಾಣ, ಪುಣ್ಯಕಥೆಗಳ ಪ್ರಕಾರ ಗೌರಿ ಗಣೇಶನ ಅಮ್ಮ. ಆದರೆ ವಸ್ತುತಃ ಮತ್ತು ತತ್ತ್ವಸಿದ್ಧಾಂತಗಳ ಪ್ರಕಾರ ಗೌರಿ ನಮ್ಮೆಲ್ಲರ ಅಮ್ಮ. ಅವಳು ಜಗದೀಶ್ವರಿ, ಜಗನ್ಮಾತೆ, ಜಗಜ್ಜನನಿ. ಅವಳು ಈಶ್ವರನ ಜೊತೆ ಜೊತೆಯಲ್ಲಿ “ಜಗತಃ ಪಿತರೌ” ಎಂಬ ಗೌರವಕ್ಕೆ ಪಾತ್ರಳಾಗಿದ್ದಾಳೆ. ಪುರಾಣ, ಪುಣ್ಯಕಥೆಗಳ ಪ್ರಕಾರ ಅವಳು ಗೌರಿಗಣೇಶ ಮಾತ್ರ!! ನಮ್ಮ, ನಿಮ್ಮಗಳ ಪ್ರಕಾರ ಆಕೆ ವರಗೌರಿ, ಸ್ವರ್ಣಗೌರಿ, ಶ್ರೀಗೌರಿ ಮತ್ತು ಮಂಗಳಗೌರಿ. ಡಾ. ಶಿವಾನಂದ ಶಿವಾಚಾರ್ಯರು ಹಿರೇಮಠ, ತುಮಕೂರು
Image
1. ವೀರಭದ್ರ ವೀರಗಾಸೆಯೂ ಅಹುದು. ಆತ ವೀರಗಾಥೆಯೂ ಅಹುದು.  2. ವೀರಭದ್ರ ಸಾಹಸಗಾಥೆಯೂ ಅಹುದು. ಆತ ಸಾಧನಾಗೀತೆಯೂ ಅಹುದು. 3. ವೀರಭದ್ರ ಕಲೆಯೂ ಅಹುದು; ಆತ ಕಾಲನೂ ಅಹುದು. ವೀರಭದ್ರ ಕುಣಿಯಲು ನಿಂತರೆ ಕಲೆ. ವೀರಭದ್ರ ಕುಣಿಸಲು ನಿಂತರೆ ಕಾಲ, ಸಾಕ್ಷಾತ್ ಪ್ರಳಯಕಾಲ.  4. ತಾಳ, ಮೇಳ, ಹೆಜ್ಜೆ, ಗೆಜ್ಜೆ ಜೊತೆಯಾದರೆ ವೀರಭದ್ರ ಕಲಾಭಾರ್ಗವ. ತಾಳ, ಮೇಳ, ಹೆಜ್ಜೆ, ಗೆಜ್ಜೆ ತಪ್ಪಿದರೆ ವೀರಭದ್ರ ಕಾಲಭೈರವ.   5. ವೀರಭದ್ರ ಮೀಸೆ ಕುಣಿಸಿದರೆ ಆತ ಮೀಸೆ ವೀರಭದ್ರ. ವೀರಭದ್ರ ಕಣ್ಣು ಕೆಂಪಾಗಿಸಿದರೆ ಆತ ಕೆಂಗಣ್ಣ ವೀರಭದ್ರ. ವೀರಭದ್ರ ಕಣ್ಣರಳಿಸಿದರೆ ಆತ ಕರುಣಾಳು ವೀರಭದ್ರ. 6. ವೀರಭದ್ರ ಒಲಿದರೆ ಪ್ರಸನ್ನರುದ್ರ;  ಮರೆತರೆ ಆತ ಪ್ರಳಯರುದ್ರ. 7. ಅರಿದೊಡೆ ಶರಣ, ಮರೆದೊಡೆ ಮಾನವ ಎಂಬ ಹಾಗೆ. ಅರಿತರೆ ವೀರಭದ್ರ ಆಪದ್ಬಾಂಧವ; ಮರೆತರೆ ವೀರಭದ್ರ ಆಪತ್ತಿಗೆ ಬಾಂಧವ. ಡಾ. ಶಿವಾನಂದ ಶಿವಾಚಾರ್ಯರು ಹಿರೇಮಠ, ತುಮಕೂರು 
Image
  Good Morning, Happy Monday 29th August 2022 @ TapOvanam, Hiremath, Tumkur ನಮ್ಮ ನಿಮ್ಮೆಲ್ಲರ ವೀರಭದ್ರ ಒಲಿದರೆ ಅವತಾರ; ಮುನಿದರೆ ಅವಾಂತರ!! ಭಾದ್ರಪದ ಮಾಸದ ಮೊದಲ ಮಂಗಳವಾರವು ರಾಜ್ಯಾದ್ಯಂತ ಮತ್ತು ರಾಷ್ಟ್ರಾದ್ಯಂತ “ವೀರಭದ್ರ ಜಯಂತಿ” ಎಂದು ಆಚರಿಸಲ್ಪಡುತ್ತಿದೆ. ವೀರಭದ್ರ ನಿಗೂ ಮಂಗಳವಾರಕ್ಕೂ ಇರುವ ನಂಟು ತುಂಬ ಹಳೆಯದು. ಅದು ಇವತ್ತು ನಿನ್ನೆಯದಲ್ಲ ಮತ್ತು ನಿನ್ನೆ ಮೊನ್ನೆಯದಲ್ಲ. ಸುದೀರ್ಘ ಕಾಲದಿಂದ ಆ ಬಂಧ-ಸಂಬಂಧವದು ಬೆಳೆದುಕೊಂಡು ಮತ್ತು ಉಳಿದುಕೊಂಡು ಬಂದಿದೆ. ಉತ್ತರ ಕರ್ನಾಟಕದಲ್ಲಿ ಈಗಲೂ ಜನಗಳು “ಮಂಗಳವಾರ ಈರಣ್ಣನ ವಾರ” ಎಂದು ಹೇಳುತ್ತಾರೆ. ಯುವಕರು ವೀರಭಧ್ರನನ್ನು “ಯೂಥ್ ಐಕಾನ್” ಆಗಿ ಸ್ವೀಕರಿಸಿರುವುದು ನಿಜಕ್ಕೂ ಅಭಿನಂದನೀಯ. ಇದುವರೆಗೆ ಬಹುತೇಕ ವೀರಶೈವರ ಮನೆದೇವರಾಗಿದ್ದ ವೀರಭದ್ರ, ಈಗ ಯುವಕರ ಮನೋದೇವರಾಗಿ ವಿಜೃಂಭಿಸುತ್ತಿರುವುದು ಹೆಮ್ಮೆಪಡಬೇಕಾದ ಸಂಗತಿ; ಮತ್ತಿದು ಸ್ವಾಗತಾರ್ಹ ಬೆಳವಣಿಗೆ!! ವೀರಭದ್ರ ಮನೆದೇವರಾದರೆ ವರುಷಕ್ಕೊಮ್ಮೆ; ಆತ ಮನೋದೇವರಾದರೆ ನಿಮಿಷಕ್ಕೊಮ್ಮೆ!! ವೀರಭದ್ರ ಮನೆದೇವರಾದರೆ ವರುಷಕ್ಕೊಮ್ಮೆ ಆತನ ದೇವಸ್ಥಾನಕ್ಕೆ ಹೋಗಿ ಹಣ್ಣು, ಕಾಯಿ ಕೊಟ್ಟು ಹರಕೆ ತೀರಿಸಿಕೊಂಡು ಬರುತ್ತಾರೆ. ಅದುವೇ ವೀರಭಧ್ರ ಮನೋದೇವರಾದರೆ ಅನುಕ್ಷಣ, ಅನುದಿನ ಆತ ಜನಗಳ ಮನೋಮಂದಿರದಲ್ಲಿ ಸಂಚರಿಸಿಕೊಂಡಿರುತ್ತಾನೆ. ವೀರಭದ್ರ ಮನೆದೇವರಾಗಿರುವುದರ ಜೊತೆ ಜೊತೆಯಲ್ಲಿ ಮನೋದೇವರಾಗಬೇಕು. ವೀರಭದ್ರ ಅಹರ್ನಿ...
Image
  Good Morning, Happy Sunday 28th August 2022 @ Hiremath, TapOvanam, Tumkur ಅಮಾವಾಸ್ಯೆ ಇದು, ಮಾಸನಿವೃತ್ತಿ ಹಾಗೂ ಮಾಸಪದಗ್ರಹಣದ ವೇದಿಕೆ. ಅಮಾವಾಸ್ಯೆ ಇದು, ಬಿದಾಯೀ, ಬಧಾಯಿಗಳ ಸುಂದರ ವೇದಿಕೆ, ಕೂಡಲಸಂಗಮ. ಅಮಾವಾಸ್ಯೆಯಲ್ಲಿ ಒಂದು ಮಾಜಿಯಾಗುತ್ತದೆ; ಇನ್ನೊಂದು ಹಾಲಿಯಾಗುತ್ತದೆ. ಅಮಾವಾಸ್ಯೆಯು ಒಂದು ಮಾಸಕ್ಕೆ ನಿವೃತ್ತಿ ವೇದಿಕೆಯಾದರೆ ಇನ್ನೊಂದು ಮಾಸಕ್ಕೆ ಅದು ಸ್ವಾಗತ ವೇದಿಕೆಯಾಗುತ್ತದೆ. ಅಮಾವಾಸ್ಯೆಯು ಒಂದು ಮಾಸದ ತಿಥಿಗೆ ಸಾಕ್ಷಿಯಾದರೆ ಇನ್ನೊಂದು ಮಾಸದ ಜಯಂತಿಗೆ ಸಾಕ್ಷಿಯಾಗುತ್ತದೆ. ಒಂದೆಡೆ ನಿನ್ನೆಯ ಅಮಾವಾಸ್ಯೆ (27. 08. 2022) ಶ್ರಾವಣ ಮಾಸದ ಬೀಳ್ಕೊಡುಗೆಗೆ ವೇದಿಕೆಯಾದರೆ ಇನ್ನೊಂದು ಕಡೆ ಅದು ಭಾದ್ರಪದ ಮಾಸದ ಸ್ವಾಗತಕ್ಕೆ ವೇದಿಕೆಯಾಯಿತು. ನಿನ್ನೆ ಶ್ರಾವಣ ಮಾಸಕ್ಕೆ ಬೀಳ್ಕೊಡುಗೆ! ಭಾದ್ರಪದ ಮಾಸಕ್ಕೆ ಸುಸ್ವಾಗತ!! ನಿನ್ನೆ ಶ್ರಾವಣ ಮಾಸಕ್ಕೆ ಬಿದಾಯೀ ಭಾದ್ರಪದ ಮಾಸಕ್ಕೆ ಬಧಾಯೀ ನಿನ್ನೆಗೆ ಶ್ರಾವಣ ಮಾಸ ತನ್ನ ಅವಧಿಯನ್ನು ಪೂರೈಸಿ ಮಾಜಿಯಾಯಿತು. ಭಾದ್ರಪದ ಮಾಸ ನಿನ್ನೆ ತಾನೆ ಪದಗ್ರಹಣ ಮಾಡಿ ಹಾಲಿಯಾಯಿತು. ಶ್ರಾವಣಮಾಸ ಶಿವಪೂಜೆಗೆ ಮೀಸಲು ಭಾದ್ರಪದಮಾಸ ಗೌರೀ, ಗಣೇಶಪೂಜೆಗೆ ಮೀಸಲು ಶ್ರಾವಣ ಮಾಸದಲ್ಲಿ ಹರ ಹರ ಮಹಾದೇವ. ಭಾದ್ರಪದ ಮಾಸದಲ್ಲಿ ವಕ್ರತುಂಡ ಮಹಾಕಾಯ. ಶ್ರಾವಣ ಮಾಸದಲ್ಲಿ “ಹರ ಹರ, ಪರಿಹರ”. ಭಾದ್ರಪದ ಮಾಸದಲ್ಲಿ “ಅವಿಘ್ನಂ ಕುರು ಮೇ ದೇವ”. ಶ್ರಾವಣ ಮಾಸದಲ್ಲಿ ಆಗಸ್ಟ್ 15, ಸ್ವಾತಂತ್ರ್ಯ ...
Image
  Good Morning, Happy Thursday, 25th August 2022 @ TapOvanam, Hiremath, Tumkur ಭಾರತವಿದು ಹತ್ತು ಹಲವು ವೈಶಿಷ್ಟ್ಯಗಳ ದೇಶ. ಭಾರತವಿದು ಹತ್ತು ಹಲವು ವೈಶಿಷ್ಟ್ಯಗಳ ದೇಶ. ಇದರಲ್ಲಿ ಎರಡು ಮಾತಿಲ್ಲ. ಯಾರಾದರೂ ಸರಿ, ಎಂಥವರಾದರೂ ಸರಿ ಇದನ್ನು ಒಪ್ಪಲೇಬೇಕು. ಭಾರತದ ಈ ಹತ್ತು ಹಲವು ವೈಶಿಷ್ಟ್ಯಗಳ ಮಧ್ಯದಲ್ಲಿ, ಈ ದೇಶದ ಇನ್ನೊಂದು ಮತ್ತು ಮತ್ತೊಂದು ಮಹತ್ತ್ವದ ವೈಶಿಷ್ಟ್ಯವೇನೆಂದರೆ, ಈ ದೇಶದಲ್ಲಿ ಬಹಳಷ್ಟು ಫಿಲಾಸಫಿಗಳು ಹುಟ್ಟುತ್ತವೆ; ಮತ್ತವು ಇಲ್ಲಿಯೇ ಸಾಯುತ್ತವೆ, ಗೋಣುಚೆಲ್ಲುತ್ತವೆ. ಬಹಳಷ್ಟು ತತ್ತ್ವ, ಸಿದ್ಧಾಂತಗಳು, ಮೌಲ್ಯಗಳು ಇಲ್ಲಿಯೇ, ಈ ನಮ್ಮ ದೇಶದಲ್ಲಿಯೇ ಹುಟ್ಟುತ್ತವೆ; ಮತ್ತವು ಇಲ್ಲಿಯೇ ಸಾಯುತ್ತವೆ. ಉದಾಹರಣಾರ್ಥವಾಗಿ ಒಂದೆರಡನ್ನು ಹೇಳಬಹುದು. 1. “ಕಾಯಕವೇ ಕೈಲಾಸ” ಎಂಬ ಫಿಲಾಸಫಿ, ತತ್ತ್ವ, ಸಿದ್ಧಾಂತ, ಮೌಲ್ಯ ಇಲ್ಲಿಯೇ, ಈ ದೇಶದಲ್ಲಿಯೇ ಹುಟ್ಟುತ್ತದೆ; ಮತ್ತದು ಇಲ್ಲಿಯೇ ಸಾಯುತ್ತದೆ. ಅದೇನಕ್ಕೆ ಎಂದರೆ, ನಾವೆಲ್ಲ ಅತಿಶಯ, ಇತೋSಪ್ಯತಿಶಯ ಸೋಂಬೇರಿಗಳಾಗುವ ಮೂಲಕ ಮತ್ತು ನಮ್ಮ ಸರಕಾರಗಳು, ಚುನಾಯಿತ ಪಕ್ಷಗಳು ಹಾಗೂ ಚುನಾಯಿತ ಜನಪ್ರತಿನಿಧಿಗಳು “ಪುಕ್ಕಟೆ”, “ಪುಗಸಟ್ಟೆ” ಮತ್ತು “ಬಿಟ್ಟಿ” ತಿನ್ನುವ ಸಂಸ್ಕೃತಿಯನ್ನು ಜನಗಳ ಮಧ್ಯದಲ್ಲಿ ಇನ್ನಷ್ಟು ಮತ್ತಷ್ಟು “ಪ್ರೊಮೋಟ್” Promote - ಮಾಡುವ ಮೂಲಕ “ಕಾಯಕವೇ ಕೈಲಾಸ ಎಂಬ ಫಿಲಾಸಫಿಯದು ಇಲ್ಲಿಯೇ ಸಾಯುತ್ತದೆ. 2. “ದಯವೇ ಧರ್ಮದ ಮೂಲವಯ್ಯ” ಎಂಬ ಫಿ...