Posts

Samskaara Bodha @ TapOvanam

Image
  >>>>>>>>>>>>>>>>>>>>>>>>>>>>>>>>>>>>>>>>>>>> ತಪೋವನದಲ್ಲಿ ಜರುಗಿದ ಸಂಸ್ಕಾರಬೋಧ ಶಿಬಿರದ ವರದಿ.. >>>>>>>>>>>>>>>>>>>>>>>>>>>>>>>>>>>>>>>>>>>>> >>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>> ವಿದ್ಯಾರ್ಥಿ, ಉದ್ಯೋಗಾರ್ಥಿಗಳ ಸಂಖ್ಯೆಯನ್ನು ಹೆಚ್ಚಿಸಿಯಾಗಿದೆ.   ಸಂಸ್ಕಾರಾರ್ಥಿ, ಸಂಯಮಾರ್ಥಿ, ಸತ್ಸಂಗಾರ್ಥಿಗಳ ಸಂಖ್ಯೆಯನ್ನು ಹೆಚ್ಚಿಸಬೇಕಾಗಿದೆ.                                            ಡಾ. ಶಿವಾನಂದ ಶಿವಾಚಾರ್ಯ ಸ್ವಾಮೀಜಿ >>>...
Image
  Good Morning, Happy Thursday 7th September 2023 @ TapOvanam, Hiremath, Tumkur ಈಗಾಗಲೇ ವಿದ್ಯಾರ್ಥಿ, ಉದ್ಯೋಗಾರ್ಥಿ, ಆದಾಯಾರ್ಥಿಗಳ ಸಂಖ್ಯೆಯನ್ನು ಹೆಚ್ಚಿಸಿಯಾಗಿದೆ. ಈಗ ಸಂಸ್ಕಾರಾರ್ಥಿ, ಸಂಯಮಾರ್ಥಿ, ಸತ್ಸಂಗಾರ್ಥಿಗಳ ಸಂಖ್ಯೆಯನ್ನು ಹೆಚ್ಚಿಸಬೇಕಾಗಿದೆ. ಡಾ. ಶಿವಾನಂದ ಶಿವಾಚಾರ್ಯರು ಹಿರೇಮಠ, ತಪೋವನ, ತುಮಕೂರು
Image
 Good Evening, Happy Wednesday 6th September 2023 @ TapOvanam, Hiremath, Tumkur ಕೃಷ್ಣ ಟ್ರಬಲ್‌ಶೂಟರ್. (Troubleshooter) ಕೃಷ್ಣ ಸ್ವತಃ ತನ್ನನ್ನು ತಾನು ``ಟ್ರಬಲ್‌ಶೂಟರ್'' ಎಂದು ಪರಿಚಯಿಸಿಕೊಂಡಿದ್ದಾನೆ. ಯದಾ ಯದಾ ಹಿ ಧರ್ಮಸ್ಯ ಗ್ಲಾನಿರ್ಭವತಿ ಭಾರತ | ಅಭ್ಯುತ್ಥಾನಂ ಅಧರ್ಮಸ್ಯ ತದಾತ್ಮಾನಂ ಸೃಜಾಮ್ಯಹಮ್ || (ಭಗವದ್ಗೀತೆ) “ಯದಾ ಧರ್ಮಸ್ಯ ಗ್ಲಾನಿಃ ಭವತಿ, ಯದಾ ಅಧರ್ಮಸ್ಯ ಅಭ್ಯುತ್ಥಾನಂ ಭವತಿ - ತದಾ ಅಹಂ ಆತ್ಮಾನಂ ಸೃಜಾಮಿ'' ಎಂದು. ಕೃಷ್ಣನ ಸಹಾಯ ಮತ್ತು ಸಾರಥ್ಯ ಇಲ್ಲದೆ ಹೋಗಿದ್ದರೆ ಪಾಂಡವರ ಗತಿ? ಪಾಂಡವರು ಮತ್ತೆ ಎದ್ದೇಳುವುದು ಆಗುತ್ತಲೇ ಇರಲಿಲ್ಲ. ಕೃಷ್ಣ ಹುಟ್ಟಿದರೆ ಅದು ಅಷ್ಟಮಿ, ಕೃಷ್ಣಜನ್ಮಾಷ್ಟಮಿ. ರಾಮ ಹುಟ್ಟಿದರೆ ಅದು ನವಮಿ, ರಾಮನವಮಿ. ಮಾ ದುರ್ಗಾ, ರಾಕ್ಷಸರನ್ನು ಹುಟ್ಟಲಿಲ್ಲ ಅನಿಸಿದರೆ ಅದು ದಶಮಿ, ವಿಜಯದಶಮಿ. ಡಾ. ಶಿವಾನಂದ ಶಿವಾಚಾರ್ಯರು ಹಿರೇಮಠ, ತಪೋವನ, ತುಮಕೂರು 
Image
  6th September 2023 @ TapOvanam, Hiremath, Tumkur ಜಿ. ಎಸ್. ಎಸ್. ಮೂರ್ತಿಯವರ ನಿಧನಕ್ಕೆ ಹಿರೇಮಠಶ್ರೀಗಳ ನುಡಿ-ಶ್ರದ್ಧಾಂಜಲಿ ಹಿರಿಯ ಜೀವ ಶ್ರೀ ಜಿ. ಎಸ್. ಎಸ್. ಮೂರ್ತಿಯವರು  ಶಿವಾಧೀನರಾಗಿದ್ದಾರೆ. ತೊಂಬತ್ತಾರು ವರುಷದ ತುಂಬು ಜೀವನವನ್ನು ಬದುಕಿದ ಪುಣ್ಯಾತ್ಮರವರು. ಮೂರ್ತಿಯವರು ಹಿರೇಮಠಕ್ಕೆ ಪರಮಾಪ್ತರು. ಹಿರೇಮಠದ ಕಾರ್ಯ, ಚಟುವಟಿಕೆ ಮತ್ತು ಕಾರ್ಯವಾಹಿನಿ ಯೊಂದಿಗೆ ಅವರು ತಮ್ಮನ್ನು ತಾವು ಓತಪ್ರೋತಗೊಳಿಸಿಕೊಂಡಿದ್ದರು. ಅವರದು ತುಂಬ ಮೃದುಸ್ವಭಾವ. ಹಾಗೇನೇ ಅವರ ಶರೀರವೂ ಮೃದು ಮತ್ತು ಶಾರೀರವೂ ಮೃದು. ಸಂಗೀತವೆಂದರೆ ಅವರಿಗೆ ಪ್ರಾಣ. ಸ್ವತಃ ಹಾಡುವುದು ಮತ್ತು  ಇನ್ನೊಬ್ಬರು ಹಾಡುವುದನ್ನು ಕೇಳಿಸಿಕೊಳ್ಳುವುದು  ಎಂದರೆ ಅವರಿಗೆ ಸುಗ್ರಾಸ ಭೋಜನವಿದ್ದಂತೆ. ನಮ್ಮ ಹಿರೇಮಠದ ಅಮಾವಾಸ್ಯಾ ಕಾರ್ಯಕ್ರಮದಲ್ಲಿ ಅವರು ಖಾಯಂ ಗಾಯಕರು. ಅಮಾವಾಸ್ಯೆಯ ದಿನ ಹಿರೇಮಠದ ಮಲ್ಲಿಕಾರ್ಜುನಸ್ವಾಮಿಗೆ ಅಪ್ಪಿತಪ್ಪಿ ಒಂದಷ್ಟು ಹೂಮಾಲೆ, ಹೂವಿನಲಂಕಾರ ಕಡಿಮೆಯಾದರೂ ನಡೆಯುತ್ತಿತ್ತೇನೋ ಆದರೆ ಜಿ. ಎಸ್. ಎಸ್. ಮೂರ್ತಿಯವರ ಗಾನಮಾಲೆಯ ಅಲಂಕಾರ ಮಾತ್ರ ಕಡಿಮೆಯಾಗುವಂತಿರಲಿಲ್ಲ. ಇಳಿವಯದಲ್ಲೂ ಅವರ ಕಂಠಸಿರಿ ಎಲ್ಲರನ್ನೂ ಆಕರ್ಷಿಸುತ್ತಿತ್ತು. “ಎಲ್ಲ ಕೇಳಲಿ ಎಂದು ನಾನು ಹಾಡುವುದಿಲ್ಲ. ಹಾಡುವುದು ಅನಿವಾರ್ಯ ಕರ್ಮ ನನಗೆ” ಎಂದು ಜಿ. ಎಸ್. ಶಿವರುದ್ರಪ್ಪನವರ ಕೋಗಿಲೆ ಹೇಳುವ ಹಾಗೆ ಜಿ. ಎಸ್. ಎಸ್. ಮೂರ್ತಿಯವರು ಜನರ ಸಂತೋಷಕ್...
Image
  Good Day, Happy Tuesday 5th September 2023 @ TapOvanam, Hiremath, Tumkur ಟೀಚರು, ಮೇಷ್ಟ್ರು ಆಗಿದ್ದ ಕಾಲಘಟ್ಟದಲ್ಲಿ ನಿತ್ಯವೂ ಶಿಕ್ಷಕ ದಿನಾಚರಣೆ. ಟೀಚರು, ಜೇಂಟ್ಸ್ ಟೀಚರ್ರು “ಸರ್, ಸರ್ರು (Sir)” ಮತ್ತು ಲೇಡಿ ಟೀಚರ್ರು “ಮಿಸ್” ಆಗಿರುವ ಈ ಕಾಲಘಟ್ಟದಲ್ಲಿ ವರ್ಷಕ್ಕೊಮ್ಮೆ ಶಿಕ್ಷಕ ದಿನಾಚರಣೆ. ಅವತ್ತು ಶಿಕ್ಷಕ ದಿನಾಚರಣೆ ದೈನಂದಿನ. ಇವತ್ತು ಶಿಕ್ಷಕ ದಿನಾಚರಣೆ ವಾರ್ಷಿಕ. ಇದು ಹಾಗೆ ಸುಮ್ಮನೇ ಅಲ್ಲ; ಇದು ಸತ್ಯ. ಇದು ವಾಸ್ತವ. ಡಾ. ಶಿವಾನಂದ ಶಿವಾಚಾರ್ಯರು ಹಿರೇಮಠ, ತಪೋವನ, ತುಮಕೂರು
Image
  Good Morning, Happy Tuesday 5th September 2023 @ TapOvanam, Hiremath, Tumkur Good Morning, Happy Tuesday 5th September 2023 @ TapOvanam, Hiremath, Tumkur ಇವತ್ತು ಸೆಪ್ಟೆಂಬರ್ ೫, ಶಿಕ್ಷಕ ದಿನಾಚರಣೆ. ಇವತ್ತು ಶಾಲಾಶಿಕ್ಷಕರ ದಿನಾಚರಣೆ. ಇವತ್ತು ಶಾಲಾಶಿಕ್ಷಕ ದಿನಾಚರಣೆ ಎಂದು ನಾವು ಒತ್ತಿ ಒತ್ತಿ ಹೇಳುತ್ತಿದ್ದೇವೆ. ನಮ್ಮ ಪ್ರಕಾರ ಶಿಕ್ಷಕರಲ್ಲಿ ಎರಡು ಪ್ರಕಾರಗಳು. ಒಂದು, ಶಾಲಾಶಿಕ್ಷಕರು. ಇನ್ನೊಂದು, ಶಾಲೇತರ ಶಿಕ್ಷಕರು. ಡಾ. ಶಿವಾನಂದ ಶಿವಾಚಾರ್ಯರು ಹಿರೇಮಠ, ತಪೋವನ, ತುಮಕೂರು ಈ ಕುರಿತಾದ ಹೆಚ್ಚಿನ ವಿವರಕ್ಕೆ ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ. ಶ್ರೀಮಠದ ಯು ಟ್ಯೂಬ್‌ನಲ್ಲಿ ಸ್ವಾಮೀಜಿಯವರ ಸಂದೇಶ ಕೇಳಿ. Click on Facebook : https://www.facebook.com/profile.php?id=100063584633912... Follow us on Blogspot : https://shivayacha.blogspot.com Follow us on You Tube: https://youtu.be/RcvfsDbiftk
Image
 September 5, ನಾಳೆ ಶಿಕ್ಷಕ ದಿನಾಚರಣೆ ಡಾ. ಸರ್ವಪಲ್ಲಿ ರಾಧಾಕೃಷ್ಣನ್‌ರವರ ಜನ್ಮದಿನ. ಅದಕ್ಕಾಗಿ ಶಿಕ್ಷಕರ ಕುರಿತಾಗಿರುವ ಮಾತು. ವಿದ್ವತ್ತ್ವಂ ದಕ್ಷತಾ ಶೀಲಂ, ಸಂಕ್ರಾಂತಿರನುಶೀಲನಂ | ಶಿಕ್ಷಕಸ್ಯ ಗುಣಾಃ ಸಪ್ತ ಸಚೇತಸ್ತ್ವಂ ಪ್ರಸನ್ನತಾ || 1. ವಿದ್ವತ್ತು Scholarship 2. ಜಾಣ್ಮೆ Cleverness 3. ಒಳ್ಳೆಯ ಆಚರಣೆ Good Conduct (Humility) 4. ಕಲಿಸುವಿಕೆಯಲ್ಲಿ ಕುಶಲತೆ Teaching Skills, 5. ನಿರಂತರ ಅಧ್ಯಯನ Repeated Study 6. ಸದಾ ಎಚ್ಚರಿಕೆ ಅಥವಾ ಸದಾಜಾಗೃತಿ Consciousness, ಮತ್ತು 7. ಕರುಣೆ, ಕಾರುಣ್ಯ - Kindness ಇವು ಉತ್ತಮ ಶಿಕ್ಷಕರ ಏಳು ಲಕ್ಷಣಗಳು Scholarship, Cleverness, Good Conduct (Humility) Teaching Skills, Repeated Study, Consciousness, Kindness These are the seven qualities of a Good Teacher. ಡಾ. ಶಿವಾನಂದ ಶಿವಾಚಾರ್ಯರು ಹಿರೇಮಠ, ತಪೋವನ, ತುಮಕೂರು