Posts

16th September 2023

Image
  ಗಣಪತಿಯದು ಹಕ್ಕಿಗಾಗಿ ಹೋರಾಟ.... ಅಸುರರು ದೇವತೆಗಳ ವಿರುದ್ಧ ಯುದ್ಧಸಾರಿದ್ದಾರೆ.  ಅಸುರರನ್ನು ಎದುರಿಸುವ ಶಕ್ತಿ ದೇವತೆಗಳಲ್ಲಿ ಇಲ್ಲ. ಏಕೆಂದರೆ ದೇವತೆಗಳು ಉಂಡುಟ್ಟುಕೊಂಡು  ಸ್ವರ್ಗದಲ್ಲಿ ಸುಖವಾಗಿ ಇದ್ದಾರೆ.  ಸ್ವರ್ಗದಲ್ಲಿರೋದರಿಂದ ದೇವತೆಗಳಿಗೆ  ತೊಂದರೆ, ತಾಪತ್ರಯಗಳ ಅನುಭವವಿಲ್ಲ.  ದೇವತೆಗಳು ಅಪಾಯ, ಆತಂಕಗಳನ್ನು  ಎದುರಿಸುವ ಮನಸ್ಥಿತಿಯನ್ನು ಕಳೆದುಕೊಂಡಿದ್ದಾರೆ.  ಭೂಮಿಯಲ್ಲಿರುವ ಮಾನವರಿಗೆ ಕಷ್ಟ, ಕಾರ್ಪಣ್ಯ,  ತೊಂದರೆ, ತಾಪತ್ರಯಗಳ ಅನುಭವ ಉಂಟು.  ಮಾನವರಿಗೆ ಕಷ್ಟ, ಸುಖಗಳ ಅನುಭವವಿದೆ.  ಮಾನವರ ಎದೆ ದೇವತೆಗಳ ಎದೆಗಿಂತ ಗಟ್ಟಿ.  ದೇವತೆಗಳಿಗಿಂತ ಮಾನವರು ಸಾಹಸಿಗಳು  ಮತ್ತು ಹೆಚ್ಚು ಧೈರ್ಯವಂತರು.  ಈ ಮೊದಲೆಲ್ಲ ದೇವಾಸುರರ ಮಧ್ಯದಲ್ಲಿ ಯುದ್ಧಗಳು  ಜರುಗಿದಾಗ ಭೂಲೋಕದ ರಾಜ, ಮಹಾರಾಜರುಗಳೇ ಮುಂಚೂಣಿಯಲ್ಲಿ ನಿಂತುಕೊಂಡು ದೇವತೆಗಳ ಪರವಾಗಿ ಯುದ್ಧ ಮಾಡಿದುದು ಉಂಟು.  ದೇವತೆಗಳಲ್ಲಿ ಮಾನವರ ಹಾಗೆ ಕಷ್ಟವನ್ನು ಸಹಿಸುವ ಶಕ್ತಿಯಾಗಲಿ, ಮತ್ತದನ್ನು ಭರಿಸುವ ಶಕ್ತಿಯಾಗಲಿ ಇಲ್ಲ. ಇದು ಕಾರಣ, ದೇವತೆಗಳು ಏನೇ ಕಷ್ಟಬಂದರೂ ಆ ಕೂಡಲೇ ತಮ್ಮ “ಹೈಕಮಾಂಡ್” ತ್ರಿಮೂರ್ತಿಗಳ ಬಳಿ ಹೋಗಿ ತಲೆ ಬಗ್ಗಿಸಿಕೊಂಡು ಕೈ ಮುಗಿದುಕೊಂಡು ನಿಲ್ಲುತ್ತಾರೆ.  ಬ್ರಹ್ಮ, ವಿಷ್ಣು, ಮಹೇಶ್ವರ - ಈ ತ್ರಿಮೂರ್ತಿಗಳೇ ದೇವತೆಗಳ “ಹೈಕಮಾಂಡು”....

16th September 2023

Image
 Good Morning, Happy Saturday 16th September 2023 @ TapOvanam, Hiremath, Tumkur  >>>>>>>>>>>>>>>>>>>>>>>>>>> ಹಳೇ ನಿಜಗಲ್‌ನ  ಎನ್. ಜಿ. ರುದ್ರಯ್ಯನವರ ನಿಧನಕ್ಕೆ ತುಮಕೂರು ಹಿರೇಮಠದ  ಶ್ರೀ ಶ್ರೀಗಳವರ ಭಾವಪೂರ್ಣ ಶ್ರದ್ಧಾಂಜಲಿ >>>>>>>>>>>>>>>>>>>>>>>>>>>>>>>>> ತುಂಬ ವಿಚಿತ್ರ ಅಲ್ವಾ,  ಈ ಜಗತ್ತಿನ ರೀತಿ, ನೀತಿ, ಬದುಕು, ಬವಣೆ? “ಇನ್ನಷ್ಟು ದಿನ ಇರಲಿ”  ಎನ್ನುವವರು ಹೋಗಿಬಿಡುತ್ತಾರೆ. “ಇನ್ನೆಷ್ಟು ದಿನ ಇರುತ್ತಾರೆ?”  ಎನ್ನುವವರು ಉಳಿದುಕೊಂಡಿರುತ್ತಾರೆ. ಹಳೇ ನಿಜಗಲ್‌ನ ನಮ್ಮ  ಎನ್. ಜಿ. ರುದ್ರಯ್ಯನವರು  ಇನ್ನೂ ಅರವತ್ತನ್ನು ತಲುಪಿರಲಿಲ್ಲ. ದೇವರು ಅವರನ್ನು ತನ್ನ ಬಳಿಗೆ  ಕರೆಯಿಸಿಕೊಂಡಿದ್ದಾನೆ. ರುದ್ರಯ್ಯನವರು ಮೊನ್ನೆ  ದಿನಾಂಕ 15. 09. 2023ರಂದು  ಶಿವೈಕ್ಯರಾಗಿದ್ದಾರೆ. ಅವರು ಇನ್ನಷ್ಟು ದಿನ ಇರಬೇಕಿತ್ತು.  ತುಂಬ ಒಳ್ಳೆಯ ಮನುಷ್ಯ.  ನಮಗಂತೂ ತುಂಬ ಆಪ್ತರು. ರುದ್ರಯ್ಯನವರು ನಮ್ಮ ಹಿರೇಮಠ  ಹಾಗೂ ತಪೋವನದ ಪರಮಾಪ್ತ ಹಿತೈಷಿ. ರುದ್ರಯ್ಯನವರದು  ಸಮಾಜಮುಖಿ ಧಾರ್ಮಿಕ ...

Yajnya Yaaga

Image
 Good Morning, Happy Friday 15th September 2023 @ Hiremath, TapOvanam, Tumkur  ಪ್ರತಿಯೊಂದು ಯಜ್ಞ, ಯಾಗವು ನಮಗೆ  “ಇದಂ ನ ಮಮ” ದೀಕ್ಷೆಯನ್ನು ಕೊಟ್ಟುಕೊಂಡಿರುತ್ತದೆ;  ಮತ್ತು  “ಇದಂ ನ ಮಮ” ಪಾಠವನ್ನು ಮಾಡಿಕೊಂಡಿರುತ್ತದೆ.   “ಇದಂ ನ ಮಮ” ಎಂದರೆ “ಇದು ನನ್ನದಲ್ಲ"  ``ಇಟ್ಸ್ ನಾಟ್ ಮೈನ್ '' It's not Mine ಎಂದರ್ಥ. “ಇದಂ ನ ಮಮ” - “ಇದು ನನ್ನದಲ್ಲ” - ಎಂಬ  ಈ ತತ್ತ್ವಜ್ಞಾನಕ್ಕಿಂತ ಇನ್ನೇನು ದೊಡ್ಡದಿದೆ?   ಈ ಬದುಕು, ಬಾಳು, ಈ ಜೀವನ, ಈ ಜಗತ್ತು  ನಮಗೆ ಕಲಿಸುವ ಬಹುದೊಡ್ಡ ಪಾಠ - “ಇದಂ ನ ಮಮ”     ಇದು ಅಕ್ಷರಶಃ ಸತ್ಯ ಕೂಡ ಅಹುದು.  ಈ ಜಗತ್ತಿನಲ್ಲಿ ಯಾವುದು ನಮ್ಮದು ಹೇಳಿ?   ಇವತ್ತು ನಮ್ಮದಾಗಿರುವುದು ಇನ್ನೊಂದು ದಿನ ಇನ್ನಾರದೋ?   ಆದ್ದರಿಂದ ನಾವು, ನೀವುಗಳು ನಮ್ಮೊಳಗೆ,  ನಮ್ಮ ಮನಸ್ಸಿನೊಳಗೆ ಮತ್ತು ನಮ್ಮ ಮನಸ್ಸಿಗೆ  “ಇದಂ ನ ಮಮ” ಹೇಳಿಕೊಂಡಿರಬೇಕು.    “ಇದಂ ನ ಮಮ” ಅನ್ನೋದು ವಾಸ್ತವ.  “ಇದಂ ಮಮ” ಅನ್ನೋದು ಭ್ರಮೆ.  ಆದ್ದರಿಂದಲೇ,  ಯಜ್ಞ, ಯಾಗಾದಿಗಳು ನಮ್ಮಗಳಿಗೆ  “ಇದಂ ನ ಮಮ” ಪಾಠಮಾಡಿಕೊಂಡಿರುತ್ತವೆ.  “ಸ್ವಾಹಾ, ಸ್ವಧಾ” ಎಂದು ನುಗ್ಗಿಕೊಂಡು  ಮೈಮೇಲೆ ಏರಿಬರುವವರ ಎದುರಿನಲ್ಲಿ  “ಇದಂ ನ ಮಮ” ಎಂದು ಹೇಳಿಕೊಂಡು  ಅಲ್ಲಿ...

15th September 2023

Image
 

14th September 2023

Image
 Good  Evening, Happy Thursday 14th September 2023 @ Hiremath, TapOvanam, Tumkur  ಶ್ರಾವಣಮಾಸವು ಸಾಧನೆಗೆ ವೇದಿಕೆಯಾದರೆ  ಭಾದ್ರಪದಮಾಸವು ಬೆನಕಾದಶಿಗೆ ವೇದಿಕೆ                                             ಡಾ. ಶಿವಾನಂದ ಶಿವಾಚಾರ್ಯರು  ಹಿರೇಮಠ, ತಪೋವನ, ತುಮಕೂರು >>>>>>>>>>>>>>>>>>>>>>>>>>>>>>>>>>>>>> ತುಮಕೂರು 14:  ``ಶ್ರಾವಣದ ನಿರ್ಗಮನಕ್ಕೆ “ಜೈ ಹೋ”.  ದ್ರಪದದ ಆಗಮನಕ್ಕೆ “ಜೈ ಹೋ”. ಇವತ್ತು ಶ್ರಾವಣದ ನಿರ್ಗಮನ  ಮತ್ತು ಭಾದ್ರಪದದ ಆಗಮನ.   ಇದುವರೆಗೂ ನಮ್ಮೊಡನಿದ್ದ ಶ್ರಾವಣ ಮಾಸವು  ಇವತ್ತು “ವಿದಾಯ” ಹೇಳಿಕೊಂಡು ಹೊರಟುಹೋಗುತ್ತಿದೆ.   ಮತ್ತೆ ಈ ಶ್ರಾವಣಮಾಸ ಆಗಮಿಸುವುದು  ಮುನ್ನೊಂದು, ಮತ್ತೊಂದು ಸಂವತ್ಸರದಲ್ಲಿಯೇ!! ಭಾದ್ರಪದ ಮಾಸವು “ಹೆಲೋ, ಹಾಯ್” ಹೇಳಿಕೊಂಡು  ನಮ್ಮ ಈ ಮಾಸದ ದೈನಂದಿನ ಗತಿ, ವಿಧಾನಗಳಿಗೆ,  ಕ್ರಿಯಾಕಲಾಪಗಳಿಗೆ ಮತ್ತು ಕಾರ್ಯಚಟುವಟಿಕೆಗಳಿಗೆ  ವೇದಿಕೆಯಾಗಲು ಆಗಮಿಸುತ್ತಿದೆ.   ಪ್ರತಿ ...

10th September 2023

Image
 Good Morning, Happy Sunday  10th September 2023 @ Hiremath, TapOvanam, Tumkur   ರೈತ ನೇಗಿಲಯೋಗಿಯಾದರೆ  ನೀವು  ಶಿಕ್ಷಕರು  ಶಿಕ್ಷಣಯೋಗಿಗಳು. ರೈತ ಕೈಯಲ್ಲಿ ನೇಗಿಲವನ್ನು ಹಿಡಿದಿದ್ದಾನೆ.  ಆತ ಹೊಲವನ್ನು ಉಳುತ್ತಾನೆ. ಆತ ಹೊಲದಲ್ಲಿ ಉಳುಮೆ ಮಾಡುತ್ತಾನೆ.   ರೈತ ಕೈಯಲ್ಲಿ ನೇಗಿಲವನ್ನು ಹಿಡಿದರೆ  ನೀವು ಕೈಯಲ್ಲಿ ಪಠ್ಯಪುಸ್ತಕಗಳನ್ನು  ಹಿಡಿದುಕೊಂಡಿರುತ್ತೀರಿ.   ರೈತ ಹೊಲದಲ್ಲಿ ಉಳುಮೆ ಮಾಡಿದರೆ  ನೀವು ವಿದ್ಯಾರ್ಥಿಗಳ ಮನಸ್ಸು ಮತ್ತು ಬುದ್ಧಿಯಲ್ಲಿ  ಉಳುಮೆ ಮಾಡುತ್ತೀರಿ.  ರೈತ ಅನ್ನದಾತನಾದರೆ  ನೀವು ಜ್ಞಾನದಾತಾ ಮತ್ತು ಶಿಕ್ಷಣದಾತರು.     ಡಾ. ಶಿವಾನಂದ ಶಿವಾಚಾರ್ಯರು   ಹಿರೇಮಠ, ತಪೋವನ, ತುಮಕೂರು

Suprabhaata

Image
Good Morning, Happy Saturday 9th September 2023 @ Hanagal, Haveri Dist  ಒಮ್ಮೆ ಹುಟ್ಟಿದ ಮೇಲೆ ಎಲ್ಲಿಯವರೆಗೆ ದೇವರು  “ಗ್ರೀನ್ ಸಿಗ್ನಲ್” (Green Signal)  ತೋರಿಸಿಕೊಂಡಿರುತ್ತಾನೋ  ಅಲ್ಲಿಯವರೆಗೆ ಓಡಿಕೊಂಡಿರೋದು.   ಯಾವಾಗ ದೇವರು  “ರೆಡ್ ಸಿಗ್ನಲ್” (Red Signal) ತೋರಿಸುತ್ತಾನೋ ಆಗ ಟೋಟಲ್ಲಾಗಿ  ನಿಂತು ಬಿಡಬೇಕು. ಮಧ್ಯ ಮಧ್ಯದಲ್ಲಿ ಅಲ್ಲಲ್ಲಿ  ಹಂಪ್ಸ್, ಸ್ಪೀಡ್ ಬ್ರೆಕರ‍್ಸ್, ಬಂದಾಗ,   ರಸ್ತೆಮಧ್ಯದಲ್ಲಿ ಮನುಷ್ಯರೋ, ಪ್ರಾಣಿಗಳೋ  ಯಾರೋ ಥಟ್ಟನೇ ಅಡ್ಡಬಂದಾಗ  ``ಬ್ರೆಕ್ '' (Break) ಹಾಕಿಬಿಟ್ಟು  ವೇಗವನ್ನು ಕಡಿಮೆ ಮಾಡಬೇಕಾಗುತ್ತದೆ. ಕಾಯಿಲೆ, ಕಸಾಲೆಗಳು, ರೋಗರುಜಿನಗಳು,  ಆಲಸ್ಯ, ಆಯಾಸಗಳು ಹಂಪ್ಸ್, ಸ್ಪೀಡ್ ಬ್ರೆಕರ‍್ಸ್  ಹಾಗೂ ಬ್ರೆಕ್ ಗಳಿದ್ದ ಹಾಗೆ.  ಇವು ನಮ್ಮನ್ನು ನಮ್ಮ ವೇಗದ ಮಧ್ಯದಲ್ಲಿ  ನಮ್ಮನ್ನು ನಿಲ್ಲಿಸುತ್ತವೆ.  ಆದರೆ ಶಾಶ್ವತವಾಗಿ ನಿಲ್ಲಿಸುವುದಿಲ್ಲ. ಅಲ್ಟಿಮೇಟ್ಲಿ, Ultimately ದೇವರು “ರೆಡ್ ಸಿಗ್ನಲ್”  ತೋರಿಸಿದಾಗಲೇ ಶಾಶ್ವತವಾಗಿ ನಿಲ್ಲೋದು!! ನಮ್ಮ ಧಾವಂತಕ್ಕೆ  ಮತ್ತು ನಮ್ಮ ಧಾವಂತದ ಬದುಕಿಗೆ  ನಮ್ಮಿಚ್ಛೆಗಿಂತ ದೇವರ ಇಚ್ಛೆಯೇ ಮುಖ್ಯ.   ಆದ್ದರಿಂದಲೇ ದೊಡ್ಡವರು  “ಭಗವದಿಚ್ಛಾ ಗರೀಯಸೀ” ಎಂದು ಹೇಳಿರೋದು. ಡಾ. ಶಿವಾನಂದ ಶಿವಾಚಾರ್ಯರ...